ಬೈಕ್ ಮತ್ತು ಸ್ಕೂಟರ್ ಕಳವು

Update: 2021-09-17 15:54 GMT

ಮಂಗಳೂರು, ಸೆ.17: ನಗರದ ಎರಡು ಪ್ರತ್ಯೇಕ ಕಡೆ ನಿಲ್ಲಿಸಲಾಗಿದ್ದ ಬೈಕ್ ಮತ್ತು ಸ್ಕೂಟರ್ ಕಳವಾದ ಬಗ್ಗೆ ವರದಿಯಾಗಿದೆ.

ಜನಾರ್ದನ ಜಯ ಶೆಟ್ಟಿಗಾರ್ ಎಂಬವರು ಸೆ.14ರಂದು ನಗರದ ಹಂಪನಕಟ್ಟೆ ಕಡೆಯಿಂದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯ ಎಡಬದಿಯ ವೆನ್ಲಾಕ್ ಆಸ್ಪತ್ರೆಯ ಅಂಬುಲೆನ್ಸ್ ಪಾರ್ಕ್ ಮಾಡುವ ಕಾಂಪೌಂಡಿನ ಹೊರಗಡೆ ರಸ್ತೆ ಬದಿಯಲ್ಲಿ ಕೀ ಸಹಿತ ಯಮಹಾ ಬೈಕ್ ಪಾರ್ಕ್ ಮಾಡಿಟ್ಟಿದ್ದರು. ಸೆ.15ರಂದು ಬಂದು ನೋಡುವಾಗ ಬೈಕನ್ನು ಕಳವು ಮಾಡಲಾಗಿದ್ದು, ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ಬೈಕ್‌ನ ಅಂದಾಜು ಮೌಲ್ಯ 20250ರೂ. ಎಂದು ತಿಳಿದು ಬಂದಿದೆ.

ಪ್ರದೀಪ್ ಕುಮಾರ್ ಎಂಬವರು ವೆಗೋ ಸ್ಕೂಟರ್‌ನ್ನು ಆ.30ರಂದು ಸಂಜೆ 5 ಗಂಟೆಗೆ ಮಾನಸಾ ಟವರ್ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿ ಸಂಜೆ 7:30ರ ವೇಳೆಗೆ ಬಂದು ನೋಡಿದಾಗ ಸ್ಕೂಟರ್ ಕಳವಾಗಿತ್ತು. ಸ್ಕೂಟರ್ ವೌಲ್ಯ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News