ಗಣೇಶೋತ್ಸವ ಸಮಿತಿ ವತಿಯಿಂದ ಸೇವಾ ಆಶ್ರಮಕ್ಕೆ ಸಹಾಯಧನ
Update: 2021-09-18 09:11 GMT
ಕಾರ್ಕಳ : ಜರಿಗುಡ್ಡೆಯ ಸುರಕ್ಷಾ ಸೇವಾಶ್ರಮಕ್ಕೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಬಸ್ಟ್ಯಾಂಡ್ ಇವರ ವತಿಯಿಂದ 10 ಸಾವಿರ ರೂ. ಸಹಾಯಧನವನ್ನು ಸಮಿತಿ ಸ್ಥಾಪಕಾದ್ಯಕ್ಷರಾದ ಶುಭದರಾವ್ ಆಶ್ರಮದ ಆಯಿಷಾರವರಿಗೆ ಹಸ್ತಾಂತರಿಸಿದರು.
ಪ್ರತೀ ವರ್ಷ ಗಣೇಶೋತ್ಸವದ ಆಚರಣೆಯಿಂದ ಉಳಿದ ಹಣದಲ್ಲಿ ಶೈಕ್ಷಣಿಕ, ಹಾಗೂ ವೈದ್ಯಕೀಯ, ನೇರವನ್ನು ನೀಡುತಾ ಬಂದಿರುವ ಸಮಿತಿಯು ಈ ಬಾರಿ ಸುರಕ್ಷಾ ಸೇವಾಶ್ರಮವನ್ನು ಆಯ್ದುಕೊಂಡಿದೆ.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರಾದ ಸುರೇಶ್ ದೇವಾಡಿಗ, ಉಪಾಧ್ಯಕ್ಷ ರಾಜರಾಮ್ ಕಾಮತ್, ಕಾರ್ಯದರ್ಶಿ ಇಕ್ಬಾಲ್ ಅಹ್ಮದ್, ಜೊತೆ ಕಾರ್ಯದರ್ಶಿ ಬಾಲಕೃಷ್ಣ ಉಪಸ್ಥಿತರಿದ್ದರು.