ಸಿಎ ಪರೀಕ್ಷೆಯಲ್ಲಿ ಮ್ಯಾಪ್ಸ್ ಕಾಲೇಜಿನಿಂದ ಉತ್ತಮ ಸಾಧನೆ

Update: 2021-09-18 12:27 GMT

ಮಂಗಳೂರು, ಸೆ.18: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ನಗರದ ಮ್ಯಾಪ್ಸ್ ಕಾಲೇಜಿನ ಬಿ.ಕಾಂ. ಇಂಟಿಗ್ರೇಟೆಡ್ ವಿದ್ಯಾರ್ಥಿಗಳಾದ ರಶ್ಮಿತಾ, ಜಯರಾಜ್ ಶೆಟ್ಟಿ, ದಿವಾಕರ್ ನಾಯಕ್ ಎಸ್., ಅನಂತ್ ಕಾಮತ್ ಹಾಗು ಅನಂತ್ ಪದ್ಮನಾಭ ಪ್ರಭು ಉತ್ತಮ ಸಾಧನೆಗೈದಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು ಮಂಗಳೂರು ವಿವಿ ನಡೆಸಿದ ಬಿ.ಕಾಂ. ಪರೀಕ್ಷೆಯಲ್ಲಿಯೂ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಈ ಸಂಸ್ಥೆಯ ಬಿಕಾಂ ಇಂಟಿಗ್ರೇಟೆಡ್ ವಿ ದ್ಯಾರ್ಥಿಗಳಾದ ಹರೀಶ್ ಭಟ್, ಮಹೀ , ಸನ್ನಿಧಿ ನಾಯ್ಕಿ, ಶರಣ್ಯ ಶೆಟ್ಟಿ , ಸುಶಾಂತ್ ಶೆಟ್ಟಿ, ಜೀತ್ ಡಿ.  ಕುಲಾಲ್, ಅಕ್ಷಿತಾ ಶೆಟ್ಟಿ, ಯಜ್ಞ, ಅಂಕಿತಾ, ನೇತ್ರಾವತಿ ತೇರ್ಗಡೆಯಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News