ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಸಹಾಯ

Update: 2021-09-19 14:21 GMT

ಕಾಪು, ಸೆ.19: ಸಮಾಜ ಸೇವಕ ರವಿ ಫ್ರೆಂಡ್ಸ್ ಕಟಪಾಡಿ ತಂಡವು ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ವೇಷ ಧರಿಸಿ ಸಂಗ್ರಹಿಸಿದ 7,22,350 ರೂ. ಹಣವನ್ನು 8 ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಹಸ್ತಾಂತರಿಸುವ ಕಾರ್ಯಕ್ರಮ ಇತ್ತೀಚೆಗೆ ಕಟಪಾಡಿ ಶ್ರೀಕ್ಷೇತ್ರ ಪೇಟೆಬೆಟ್ಟುವಿನಲ್ಲಿ ಜರಗಿತು.

ಕೇಮಾರು ಶ್ರೀಈಶ ವಿಠ್ಠಲ ಸ್ವಾಮೀಜಿ ಆಶೀರ್ವಚನ ನೀಡಿದರು. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಮಣಿಪಾಲ ಡಿಜಿಟಲ್ ನೆಟ್ ವರ್ಕ್ ಲಿ.ನ ಮುಖ್ಯಸ್ಥ ಹರೀಶ್ ಭಟ್ ಮಾತನಾಡಿದರು.

ಶ್ರೀ ಕ್ಷೇತ್ರ ಪೇಟೆಬೆಟ್ಟುವಿನ ಗುರಿಕಾರ ಹರಿಶ್ಚಂದ್ರ ಪಿಲಾರು, ರವಿ ್ರೆಂಡ್ಸ್ ತಂಡದ ಮಾರ್ಗದರ್ಶಕ ಕೆ.ಮಹೇಶ್ ಶೆಣೈ, ವೈದ್ಯ ಡಾ.ಎ.ರವೀಂದ್ರನಾಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಜಿಯಲ್ಲಾ ಸ್ವಾಗತಿಸಿ, ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News