ಅಮ್ಮೆಂಬಳ ಹೆಲ್ಪ್‌ಲೈನ್‌ಗೆ ಪದಾಧಿಕಾರಿಗಳ ಆಯ್ಕೆ

Update: 2021-09-19 14:58 GMT
ಉಬೈದ್ ಅಮ್ಮೆಂಬಳ

ಮಂಗಳೂರು, ಸೆ.19: 'ಅಮ್ಮೆಂಬಳ ಹೆಲ್ಪ್‌ಲೈನ್‌' ಸಂಘಟನೆಯ ಎರಡನೆ ವಾರ್ಷಿಕ ಸಭೆಯು ಇತ್ತೀಚೆಗೆ ಅಮ್ಮೆಂಬಳದಲ್ಲಿ ನಡೆದು 2021-22ನೆ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಉಬೈದ್ ಸಂಘಟನೆಯು ಎರಡು ವರ್ಷದಲ್ಲಿ 10,70,000 ರೂ. ಧನಸಹಾಯವನ್ನು ಅಮ್ಮೆಂಬಳ ಜಮಾತಿಗೆ ಒಳಪಟ್ಟ ಅರ್ಹರ ಮದುವೆಗೆ , ಕೊರೋನ ಸಮಯದಲ್ಲಿ ಕಿಟ್, ರಮಳಾನ್ ಕಿಟ್, ರೋಗಿಗಳಿಗೆ ನೆರವು ಸಹಿತ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾಗಿ ಎರಡನೇ ಬಾರಿಗೆ ಉಬೈದ್ ಬಿ ಎಚ್ ಪುರನಾಯ್ಕೆಯಾದರು. ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ (ಪುತ್ತ) ಮತ್ತು ಅಶ್ರಫ್ ಬಿ. ಪ್ರಧಾನ ಕಾರ್ಯದರ್ಶಿಯಾಗಿ ಫರ್ವೀಝ್, ಜೊತೆ ಕಾರ್ಯದರ್ಶಿಯಾಗಿ ಫಾರೂಕ್ ಕೋಟೆ, ಮನ್ಸೂರ್, ಸಂಘಟನಾ ಕಾರ್ಯದರ್ಶಿಯಾಗಿ ರಿಝ್ವಾನ್ ಯು.ಕೆ, ಮಾಧ್ಯಮ ಕಾರ್ಯದರ್ಶಿಯಾಗಿ ಜವಾದ್, ಕೋಶಾಧಿಕಾರಿಯಾಗಿ ಲತೀಫ್ ಟಿ.,ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಿಯಾಝ್ ಟಿ., ಶಬೀರ್ ಕೋಟೆ, ನಬೀಲ್, ನಿಝಾಂ, ಆರಿಫ್ ಯು.ಕೆ, ಇಕ್ಬಾಲ್ ಐ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News