ಬಲಿಪ ಭಾಗವತರಿಗೆ ಸನ್ಮಾನ, ಆರ್ಥಿಕ ನೆರವು
Update: 2021-09-19 16:41 GMT
ಮಂಗಳೂರು, ಸೆ.19: ಪಟ್ಲ ಫೌಂಡೇಶನ್ ವತಿಯಿಂದ ಹಿರಿಯ ಬಲಿಪ ಭಾಗವತರಿಗೆ ಸನ್ಮಾನ ಮತ್ತು ಕಿರಿಯ ಬಲಿಪ ಭಾಗವತರಿಗೆ ವೈದ್ಯಕೀಯ ನೆರವು ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಯಕ್ಷರಂಗದ ಬೀಷ್ಮ ಹಾಗೂ ಹಿರಿಯ ಭಾಗವತರೂ 2017ರ ಪಟ್ಲ ಪ್ರಶಸ್ತಿ ಪುರಸ್ಕೃತರೂ ಆಗಿರುವ ಬಲಿಪ ನಾರಾಯಣ ಭಾಗವತರ ಮನೆಗೆ ತೆರಳಿ ಸನ್ಮಾನಿಸಲಾಯಿತು. ಅಸೌಖ್ಯದಲ್ಲಿರುವ ಪ್ರಸಾದ್ ಬಲಿಪ ಭಾಗವತರಿಗೆ ವೈದ್ಯಕೀಯ ವೆಚ್ಚದ ನೆರವಿವಾಗಿ 50,000 ರೂ.ವನ್ನು ಟ್ರಸ್ಟ್ ವತಿಯಿಂದ ನೀಡಲಾಯಿತು.
ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಕೇಂದ್ರೀಯ ಸಮಿತಿಯ ಪದಾಧಿಕಾರಿಗಳಾದ ಡಾ. ಮನು ರಾವ್, ರಾಜೀವ ಪೂಜಾರಿ ಕೈಕಂಬ, ಕೆ. ಪುರುಷೋತ್ತಮ ಭಂಡಾರಿ, ಸಿಎ ಸುದೇಶ್ ಕುಮಾರ್ ರೈ, ಜಗನ್ನಾಥ ಶೆಟ್ಟಿ ಬಾಳ, ರವಿ ಶೆಟ್ಟಿ ಅಶೋಕನಗರ ಹಾಗೂ ಮೂಡುಬಿದಿರೆ ಘಟಕದ ಪದಾಧಿಕಾರಿಗಳಾದ ದಿವಾಕರ್ ಶೆಟ್ಟಿ ತೋಡಾರ್, ಪ್ರೇಮನಾಥ್ ಮಾರ್ಲ ಕೆ, ರವಿ ಪ್ರಸಾದ್ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ಅರುಣ್ ಕೋಟ್ಯಾನ್ ಉಪಸ್ಥಿತರಿದ್ದರು.