ಕೆಐಸಿ ಸೌದಿ ಅರೇಬಿಯಾ ನೂತನ ರಾಷ್ಟ್ರೀಯ ಸಮಿತಿ ಆಸ್ತಿತ್ವಕ್ಕೆ

Update: 2021-09-19 17:40 GMT

ಜುಬೈಲ್ : ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯಾಸಂಸ್ಥೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ (ಕೆಐಸಿ) ಇದರ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ರೂಪೀಕರಣ ಸಭೆಯು ಜುಬೈಲ್ ನ ಕುಕ್ ಝೋನ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಕೆಐಸಿ ಸಂಸ್ಥೆಯ ಹಿತೈಷಿ ಅಬ್ದುಲ್ ರಹ್ಮಾನ್ ಬಾಖವಿ ಅವರು ದುಆ ನೆರವೇರಿಸಿದರು. ಕೆಐಸಿ ಜುಬೈಲ್ ಸಮಿತಿಯ ಸಲಹಾ ಸಮಿತಿ ಸದಸ್ಯ ಅಬ್ದುಲ್ ಹಮೀದ್ ಅರೆಮಾಕ್ಸ್  ಉದ್ಘಾಟಿಸಿ, ಕೆಐಸಿ ಜುಬೈಲ್ ಸಮಿತಿಯ ಅಧ್ಯಕ್ಷ ಅಬ್ದುಲ್ ಲತೀಫ್ ಮರಕ್ಕಿಣಿ ಅಧ್ಯಕ್ಷತೆ  ವಹಿಸಿದ್ದರು.

ಕೆಐಸಿ ಜುಬೈಲ್ ಸಮಿತಿಯ ಸಲಹಾ ಸಮಿತಿ ಸದಸ್ಯ ಸುಲೈಮಾನ್ ಖಾಸಿಮಿ ಬಾಯಾರ್ ಅವರು ನೂತನ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.

ಕೆಐಸಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಮರಕ್ಕಿಣಿ, ಉಪಾಧ್ಯಕ್ಷರಾಗಿ ಬಶೀರ್ ಸವಣೂರು, ಝಕರಿಯಾ ಕೊರಿಂಗಿಲ, ಇರ್ಷಾದ್ ಕುಂಡಡ್ಕ, ಅಮ್ಜಾದ್ ಖಾನ್ ಪೋಳ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ನೌಶಾದ್ ಪೋಳ್ಯ, ಕೋಶಾಧಿಕಾರಿಯಾಗಿ ಅಶ್ರಫ್ ಮುಕ್ವೆ, ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಕುಕ್ಕುವಳ್ಳಿ, ಸುನೀರ್ ಕೂರ್ನಡ್ಕ, ಅಬ್ದುಲ್ ಹಮೀದ್ ಕಬಕ, ಕಾರ್ಯಾಧ್ಯಕ್ಷರಾಗಿ ಬಶೀರ್ ಅರಂಬೂರು, ಇಕ್ಬಾಲ್ ಕುಂತೂರು ಸಂಘಟನಾ ಕಾರ್ಯದರ್ಶಿಗಳಾಗಿ ಇಕ್ಬಾಲ್ ಮುಂಡೋಡಿ, ಜಲೀಲ್ ಕೇಕನಾಜೆ, ಲೆಕ್ಕ ಪರಿಶೋಧಕರಾಗಿ ನೌಫಲ್ ಕೂರ್ನಡ್ಕ, ಸಲಹಾ ಸಮಿತಿಯ ಸದಸ್ಯರಾಗಿ ಝಕರಿಯಾ ಜೋಕಟ್ಟೆ (ಅಲ್-ಮುಝೈನ್ ಗ್ರೂಪ್), ಸೈಯದ್ ಅಹಮದ್ ತಂಙಳ್ ಉಪ್ಪಿನಂಗಡಿ, ಸುಲೈಮಾನ್ ಖಾಸಿಮಿ ಬಾಯಾರ್, ಇಸ್ಮಾಯಿಲ್ ಎನ್.ಜಿ.ಸಿ, ಶರೀಫ್, ಹಾರಿಸ್ ಎಸ್.ಎ ಪುತ್ತೂರು, ಅಬ್ದುಲ್ ಹಮೀದ್ ಅರೆಮಾಕ್ಸ್, ಫಿರೋಝ್ ಪರ್ಲಡ್ಕ, ಫಾರೂಖ್ ಕನ್ಯಾನ, ರಝಾಕ್ ಮಂಡೆಕೋಲು, ಅಹಮದ್ ರಫೀಕ್ ಮಂಗಳೂರು, ಕೆಐಸಿ ಸೌದಿ ಅರೇಬಿಯಾ ಅಂತರಾಷ್ಟ್ರೀಯ ಉಸ್ತುವಾರಿಗಳಾಗಿ ಇಸ್ಮಾಯಿಲ್ ಕೂರ್ನಡ್ಕ, ಶಾಲಿಕ್ ಪುತ್ತೂರು, ತಾಹಿರ್ ಸಾಲ್ಮರ, ಆಸಿಫ್ ಪುತ್ತೂರು, ಮುಸ್ತಫಾ ಗೂನಡ್ಕ, ಮಾಧ್ಯಮ ವಿಭಾಗದ ಉಸ್ತುವಾರಿಗಳಾಗಿ ಅಬಿಝರ್ ಕೂರ್ನಡ್ಕ, ಅನಸ್ ವಿಟ್ಲ ಹಾಗು ಕಾರ್ಯಕಾರಿಣಿ ಸದಸ್ಯರಾಗಿ ನವಾಝ್ ಮುಕ್ವೆ, ಅಬ್ದುಲ್ ಸತ್ತಾರ್ ಪುತ್ತೂರು, ಮುಹಮ್ಮದ್ ಶಫೀಕ್ ಪುತ್ತೂರು, ನಿಝಾರ್ ಆರಾಂಡ, ಮೊಹಮ್ಮದ್ ರಿಯಾಝ್, ಮೊಹಮ್ಮದ್ ರಿಯಾಝ್, ಮುಷ್ತಾಕ್ ಮೊಹಮ್ಮದ್, ಮೊಹಮ್ಮದ್ ಅಶ್ರಫ್, ಅಬ್ದುಲ್ ಹಮೀದ್ ಕಾಪು,ಅಶ್ರಫ್ ಬೆದ್ರಾಳ ಅವರು ಆಯ್ಕೆಯಾದರು.

ಮುಹಮ್ಮದ್ ನವಾಝ್ ಮುಕ್ವೆ ಸ್ವಾಗತಿಸಿ, ತಾಹಿರ್ ಸಾಲ್ಮರ  ವಂದಿಸಿದರು. ಅಶ್ರಫ್ ನೌಶಾದ್ ಪೋಳ್ಯ  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News