ಆರ್ಎಸ್ಬಿ ಸಮಾಜದ ಧುರೀಣರಿಗೆ ಶ್ರದ್ಧಾಂಜಲಿ ಸಭೆ
ಉಡುಪಿ, ಸೆ.20: ಇತ್ತೀಚೆಗೆ ನಿಧನರಾದ ಆರ್ಎಸ್ಬಿ ಸಂಘ ಬಂಟಕಲ್ಲು -ಮಣಿಪಾಲ ಇದರ ಮಾಜಿ ಅಧ್ಯಕ್ಷ ಪಟ್ಲ ಅಣ್ಣಯ್ಯ ನಾಯಕ್ ಮತ್ತು ಉದ್ಯಮಿ ಕೆ.ವಾಸುದೇವ ಕಾಮತ್ ಅವರಿಗೆ ಸಂಘದ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯನ್ನು ಮಣಿಪಾಲದ ಆರ್ಎಸ್ಬಿ ಸಭಾಭವನದಲ್ಲಿ ಜರಗಿತು.
ಸಂಘದ ಅಧ್ಯಕ್ಷ ಎಂ.ಗೋಕುಲ್ದಾಸ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ.ಬಾಲಕೃಷ್ಣ ನಾಯಕ್ ಬನ್ನಂಜೆ, ಉಪೇಂದ್ರ ನಾಯಕ್ ಬಡಗಬೆಟ್ಟು, ಹಿರ್ಗಾನ ಶ್ರೀಲಕ್ಷ್ಮೀಪುರ ದೇವಳದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ್ ವಾಗ್ಲೆ, ನರಸಿಂಗೆ ದೇವಳದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಣ್ಕಾರ್, ಕಾರ್ಕಳ ರಾಜಾಪುರ ಸಾರಸ್ವತ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ದುರ್ಗಾಪರಮೇಶ್ವರೀ ಸೊಸೈಟಿ ಅಧ್ಯಕ್ಷ ಅಶೋಕ್ ಕಾಮತ್ ಕೊಡಂಗೆ, ಶಿವಮೊಗ್ಗ ಆರ್ಎಸ್ಬಿ ಸಂಘದ ಅಧ್ಯಕ್ಷ ಪ್ರಭಾಕರ ನಾಯಕ್, ಪುನಾರು ಬೆಳ್ಮಣ್ ಸೂಡ ಆರ್ಎಸ್ಬಿ ಸಂಘದ ಅಧ್ಯಕ್ಷ ರಂಜಿತ್ ಕೆ.ಎಸ್, ಮುಂಬಯಿ ಆರ್ಎಸ್ಬಿ ಸಂಘದ ಮಾಜಿ ಅಧ್ಯಕ್ಷ ಸದಾನಂದ ನಾಯಕ್, ಸಾರಸ್ವತ ಸಂದೇಶ್ ಪತ್ರಿಕೆ ಸಂಪಾದಕ ಎಸ್.ಗೋಪಾಲೃಷ್ಣ ನಾಯಕ್, ಕಾರ್ತಿಕ್ ಪ್ರಭು ಸಗ್ರಿ, ಬಿ.ಪುಂಡಲೀಕ ಮರಾಠೆ ಬಂಟಕಲ್ಲು ನುಡಿನಮನ ಸಲ್ಲಿಸಿದರು.
ಮಣಿಪಾಲ ಆರ್ಎಸ್ಬಿ ಮಹಿಳಾ ವೇದಿಕೆ ಅಧ್ಯಕ್ಷೆ ಮೋಹಿನಿ ಎನ್. ನಾಯಕ್, ವಿಶ್ವನಾಥ್ ಕಾಮತ್, ಸುಚೀಂದ್ರ ನಾಯಕ್ ಉಪಸ್ಥಿತರಿದ್ದರು. ಸುಮಿತ್ರಾ ಎಚ್.ನಾಯಕ್ ಕಾರ್ಯಕ್ರಮ ನಿರೂಪಿಸಿದು. ಜಗನ್ನಾಥ್ ನಾಯಕ್ ವಂದಿಸಿದರು.