ಗುರುಪುರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಮಹಾಸಭೆ

Update: 2021-09-22 10:50 GMT

ಗುರುಪುರ, ಸೆ.22: ಮೂವತ್ತೈದು ಮದ್ರಸಗಳನ್ನು ಒಳಗೊಂಡ ಗುರುಪುರ ರೇಂಜ್ ಮದ್ರಸ ಮ್ಯಾನೆಜ್‌ಮೆಂಟ್‌ನ ಮಹಾಸಭೆಯು ಸೂರಲ್ಪಾಡಿ ಮದ್ರಸ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸೂರಲ್ಪಾಡಿ ಮಸೀದಿಯ ಖತೀಬ್ ಉಸ್ಮಾನ್ ದಾರಿಮಿ ದುಆಗೈದರು. ಗುರುಪುರ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಜಮಾಲುದ್ದೀನ್ ದಾರಿಮಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

2021-22ನೆ ಸಾಲಿನ ಸಮಿತಿಯ ಅಧ್ಯಕ್ಷರಾಗಿ ನೌಶಾದ್ ಹಾಜಿ ಸೂರಲ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಮಳಲಿ, ಜೊತೆ ಕಾರ್ಯದರ್ಶಿಯಾಗಿ ಹನೀಫ್ ಹಾಜಿ ಹಾಗೂ ಎಂ.ಜಿ.ಅಬ್ದುಲ್ ಅಝೀಝ್ ಭಾಷಾ, ಉಪಾಧ್ಯಕ್ಷರಾಗಿ ಎಂ.ಎಚ್. ಮೊಯ್ದೀನ್ ಹಾಜಿ ಹಾಗೂ ಝೈನುದ್ದೀನ್ ಅಡ್ಡೂರು, ಕೋಶಾಧಿಕಾರಿಯಾಗಿ ಅಹ್ಮದ್ ಹುಸೈನ್ ಕೈಕಂಬ, ಜಿಲ್ಲಾ ಕೌನ್ಸಿಲರಾಗಿ ಮೆಟ್ರೊ ಶಾಹುಲ್ ಹಮೀದ್ ಹಾಜಿ ಹಾಗೂ ಇಸ್ಮಾಯಿಲ್ ಉಳಾಯಿಬೆಟ್ಟು, ಪತ್ರಿಕಾ ಕಾರ್ಯದರ್ಶಿಯಾಗಿ ದಾವೂದ್ ಸೈಟ್ ಅವರನ್ನು ಆಯ್ಕೆಮಾಡಲಾಯಿತು.

ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಸಿರಾಜುದ್ದೀನ್ ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News