ಮಲ್ಲೂರು ದೆಮ್ಮೆಲೆ ಮದ್ರಸದಲ್ಲಿ ಮುಅಲ್ಲಿಮ್ ಡೆ

Update: 2021-09-22 10:53 GMT

ಮಂಗಳೂರು, ಸೆ.22: ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲೂರು ದೆಮ್ಮಲೆ ಇದರ ವತಿಯಿಂದ ನೂರುಲ್ ಉಲೂಮ್ ಮದ್ರಸದಲ್ಲಿ ಮುಅಲ್ಲಿಮ್ ಡೇ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಜಮಾಅತ್ ಉಪಾಧ್ಯಕ್ಷ ಎಂ.ಡಿ.ಅಬ್ದುಲ್ ಕರೀಮ್ ದೆಮ್ಮಲೆ ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಮುಹಮ್ಮದ್ ಸಲೀಂ ಅರ್ಶದಿ ಸಭೆಯನ್ನು ಉದ್ಘಾಟಿಸಿದರು. ಇಸ್ಮಾಯಿಲ್ ಅಝ್ಹರಿ ಹಾಗೂ ಅಹ್ಮದ್ ಮುಸ್ಲಿಯಾರ್ ಮಾತನಾಡಿದರು.

ಸ್ವದಕತುಲ್ಲಾ ಫೈಝಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಹ್‌ಳೀಮ್ ತರಗತಿ ನಡೆಸಿದರು. ಸಭೆಯಲ್ಲಿ ಎಸ್‌ಕೆಎಸ್‌ಬಿವಿ ಹಳೆ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪ್ರಮಾಣವಚನ ನಡೆಯಿತು. ಈ ಸಂದರ್ಭ ರೇಂಜ್ ಮಟ್ಟದಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಅತಿಥಿಗಳಾಗಿ ಮಾಜಿ ಅಧ್ಯಕ್ಷ ಟಿ.ಹೆಚ್.ಅಬ್ದುಲ್ ರಹಿಮಾನ್, ಎಂ.ಕೆ.ಯೂಸುಫ್ ಬದ್ರಿಯಾನಗರ, ಮಾಜಿ ಉಪಾಧ್ಯಕ್ಷ ಡಿ. ಅಹಮ್ಮದ್ ಆಲಿಯಬ್ಬ, ಉಪಾಧ್ಯಕ್ಷ ಮುಹಮ್ಮದ್ ಆಸೀಫ್ ದೆಮ್ಮಲೆ, ಉಪ ಕಾರ್ಯದರ್ಶಿ ಎಂ.ಹೆಚ್.ರಫೀಕ್ ಮಲ್ಲೂರು, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಜಿ.ಬಶೀರ್ ಗಾಣೆಮಾರ್, ಜಬ್ಬಾರ್ ಮಲ್ಲೂರು, ಸ್ಥಳೀಯರಾದ ರಹೀಂ ಪಟೇಲ್ ಬಾಗ್, ಡಿ. ಮುಹಮ್ಮದಾಲಿ, ಅಬ್ದುಲ್ ಆಲಿ, ಡಿ. ಮುಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು.

ಉಪ ಕಾರ್ಯದರ್ಶಿ ಅಲ್ತಾಫ್ ದೆಮ್ಮಲೆ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಬೀರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News