ಅಸದುಲ್ಲಾ ಸಲೀಂ, ಅನೂಪ್ ಶೆಣೈ ರಾಷ್ಟ್ರಮಟ್ಟದ ಥ್ರೋಬಾಲ್ ಚಾಂಪಿಯನ್‌ಶಿಪ್ ಪಂದ್ಯಾಟಕ್ಕೆ ಆಯ್ಕೆ

Update: 2021-09-22 15:32 GMT
ಅಸದುಲ್ಲಾ ಸಲೀಂ / ಅನೂಪ್ ಶೆಣೈ

ಉಪ್ಪಿನಂಗಡಿ, ಸೆ.22: ಹರ್ಯಾಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಥ್ರೋಬಾಲ್ ಚಾಂಪಿಯನ್‌ಶಿಪ್ ಪಂದ್ಯಾಟಕ್ಕೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ 10ನೇ ತರಗತಿಯ ವಿದ್ಯಾರ್ಥಿ ಅಸದುಲ್ಲಾ ಸಲೀಂ ಹಾಗೂ 9ನೇ ತರಗತಿಯ ವಿದ್ಯಾರ್ಥಿ ಅನೂಪ್ ಶೆಣೈ ಆಯ್ಕೆಯಾಗಿದ್ದಾರೆ.

ಥ್ರೋಬಾಲ್ ಅಸೋಸಿಯೇಶನ್ ಆಫ್ ಕರ್ನಾಟಕ ಸೆ.19ರಂದು ಮಂಡ್ಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಥ್ರೋಬಾಲ್ ಆಯ್ಕೆಯ ಪಂದ್ಯಾಟದಲ್ಲಿ ಇವರು ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದ ಪಂದ್ಯಾಟವು ಅಕ್ಟೋಬರ್ 29ರಿಂದ 31ರವರೆಗೆ ಹರ್ಯಾಣದಲ್ಲಿ ನಡೆಯಲಿದೆ.

ಅಸುದಲ್ಲಾ ಸಲೀಂ ಅವರು 34 ನೆಕ್ಕಿಲಾಡಿ ನಿವಾಸಿ ಮುಹಮ್ಮದ್ ಸಲೀಂ ಮತ್ತು ನಸೀಮಾ ದಂಪತಿಯ ಪುತ್ರ. ಅನೂಪ್ ಶೆಣೈಯವರು ಉಪ್ಪಿನಂಗಡಿ ನಿವಾಸಿ ಅನಂತ ಶೆಣೈ ಮತ್ತು ಅನುಷಾ ಶೆಣೈ ದಂಪತಿಯ ಪುತ್ರ.

ಆಯ್ಕೆಯಾದ ವಿದ್ಯಾರ್ಥಿಗಳಿಬ್ಬರೂ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿಜೇತ್ ಹಾಗೂ ಗೋಪಿನಾಥ್‌ರಿಂದ ತರಬೇತಿ ಪಡೆಯುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News