ಮಲ್ಪೆ: ದೋಣಿಯಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2021-09-22 17:42 GMT

ಮಲ್ಪೆ, ಸೆ.22: ಕೈರಂಪಣಿ ಮೀನುಗಾರಿಕೆ ವೇಳೆ ದೋಣಿಯಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಸೆ.21ರಂದು ಸಂಜೆ ತೊಟ್ಟಂ ಪೊಟ್ಟಳಿವೆ ಕಡಲ ಕಿನಾರೆಯಲ್ಲಿ ನಡೆದಿದೆ.

ಮೃತರನ್ನು ರಾಜೇಶ್ ಶ್ರೀಯಾನ್(37) ಎಂದು ಗುರುತಿಸಲಾಗಿದೆ. ತೆಂಕನಿಡಿ ಯೂರು ಗ್ರಾಮದ ಬೈಲಕೆರೆಯ ಶಿವ ಕುಂದರ್ ಎಂಬವರ ಕೈರಂಪಣಿ ನಾಡ ದೋಣಿಯಲ್ಲಿ 35 ಮೀನುಗಾರರ ತಂಡ ಮೀನುಗಾರಿಕೆ ನಡೆಸುತ್ತಿದ್ದು, ಈ ವೇಳೆ ದೋಣಿಯಲ್ಲಿದ್ದ ಮೀನುಗಾರರು ಸಮುದ್ರದಲ್ಲಿ ಬಲೆಯನ್ನು ಬಿಡುತ್ತ ಬರುವಾಗ ಅಲೆಗಳ ಅಬ್ಬರಕ್ಕೆ ದೋಣಿಯಲ್ಲಿದ್ದ ರಾಜೇಶ್ ಆಯ ತಪ್ಪಿ ನೀರಿಗೆ ಬಿದ್ದರೆನ್ನಲಾಗಿದೆ.

ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News