ಎಂಆರ್‌ಪಿಎಲ್ ಚಿಮಿಣಿಯಲ್ಲಿ ದಟ್ಟ ಹೊಗೆ: ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ

Update: 2021-09-22 17:50 GMT

ಮಂಗಳೂರು: ನಗರದ ಹೊರವಲಯದ ಎಂಆರ್ ಪಿಎಲ್ ಚಿಮಿಣಿ ಕೊಳವೆಯಲ್ಲಿ‌ ಬೆಂಕಿ ಸಹಿತ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಭೀತರಾದ ಸ್ಥಳೀಯರು ಜಮಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಜೋಕಟ್ಟೆ ಭಾಗದಲ್ಲಿರುವ ಎಂಆರ್‌ಪಿಎಲ್‌ನ ಚಿಮಿಣಿ ಕೊಳವೆಯಲ್ಲಿ ಬೆಂಕಿ ಉಗುಳುತ್ತಾ ದಟ್ಟ ಹೊಗೆ ಕಾಣಿಸಿಕೊಂಡಿದೆ. ಈ ಸಂದರ್ಭ ಭೀತರಾದ ಸ್ಥಳೀಯ ಜನರು ಕಳವಾರು ಪರಿಸರದಲ್ಲಿ ಸಾಗುತ್ತಿದ್ದ ಎಂಆರ್‌ಪಿಎಲ್ ಅಧಿಕಾರಿಗಳನ್ನು ತಡೆದು ನಿಲ್ಲಿಸಿ ರಸ್ತೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

'ರಾತ್ರಿ ಹೊತ್ತು ವಾರಕ್ಕೆ ಎರಡು ಬಾರಿಯಂತೆ ಈ ರೀತಿಯಲ್ಲಿ ಹೊಗೆ ಬಿಟ್ಟಲ್ಲಿ ಇಲ್ಲಿನ ಜನತೆ ಬದುಕುವುದಾದರೂ ಹೇಗೆ' ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News