ಡಿವೈಎಫ್ಐ ಮುಡಿಪು ಘಟಕದ ಸಮಾವೇಶ

Update: 2021-09-22 18:16 GMT

ಮುಡಿಪು: ತುಳುನಾಡಿನ ಅಭಿವೃದ್ಧಿಯಲ್ಲಿ ತುಳುನಾಡಿನ ಯುವಜನರಿಗೆ ದೊಡ್ಡ ಪಾಲು ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಿ ಎಂಬ ಘೋಷಣೆಯಲ್ಲಿ ಮುಡಿಪು ಪ್ರದೇಶದಲ್ಲಿ ಯುವಜರ ಸಮಾವೇಶ ನಡೆಯಿತು.

ಸಮಾವೇಶವನ್ನು ಉಧ್ಘಾಟಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಯುವಜನತೆಯನ್ನ ಗಂಭೀರವಾಗಿ ಕಾಡುತ್ತಿರುವ  ನಿರುದ್ಯೋಗ ಸಮಸ್ಯೆ ವಿರುದ್ದ ಯುವಕರು ಹೋರಾಟ ನಡೆಸಬೇಕು ಎಂದು ಕರೆನೀಡಿದರು.

ಸಭೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ಡಾ.ಜೀವನ್ ರಾಜ್ ಕುತ್ತಾರ್, ಡಿವೈಎಫ್ಐ ಜಿಲ್ಲಾ ಜೊತೆಕಾರ್ಯದರ್ಶಿ ಅಡ್ವೊಕೇಟ್ ನಿತಿನ್ ಕುತ್ತಾರ್, ಡಿವೈಎಫ್ಐ ಜಿಲ್ಲಾ ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು ಮಾತನಾಡಿದರು.

ಸಭೆಯಲ್ಲಿ ಡಿವೈಎಫ್ಐ ಉಳ್ಳಾಲ ವಲಯ ಅಧ್ಯಕ್ಷರಾದ ರಪೀಕ್ ಹರೇಕಳ,  ಡಿವೈಎಫ್ಐ ಉಳ್ಳಾಲ ವಲಯ ಕಾರ್ಯದರ್ಶಿ ಸುನೀಲ್ ತೇವುಲ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆಯ ಅಧ್ಯಕ್ಷತೆಯನ್ನು ರಝಾಕ್ ಮುಡಿಪು ವಹಿಸಿದ್ದರು, ನಿಝಾರ್  ಮುಡಿಪು ಧನ್ಯವಾದಗೈದರು.

ಸಮಾವೇಶದಲ್ಲಿ ಮುಡಿಪು ಘಟಕ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶಾಪಿ ಮುಡಿಪು ಮತ್ತು ಕಾರ್ಯದರ್ಶಿಯಾಗಿ ಅಕ್ತರ್ ಮುಡಿಪು ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಳೆಪುಣಿ ಘಟಕದ ಕಾರ್ಯದರ್ಶಿ ಕಲಂದರ್,  ಕೋಶಾಧಿಕಾರಿ ನಝೀರ್ ಮತ್ತು  ರಫೀಕ್ ಮೊಂಟೆಪದವು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News