ಭಟ್ಕಳ: ಬಿಜೆಪಿ ಯುವ ಮೋರ್ಚಾದಿಂದ ಸೇವಾ ಮತ್ತು ಸಮರ್ಪಣಾ ಅಭಿಯಾನ

Update: 2021-09-24 13:56 GMT

ಭಟ್ಕಳ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆ ಅಂಗವಾಗಿ 20 ದಿನಗಳ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಡಿಯಲ್ಲಿ 6ನೇ ದಿನದ ಕಾರ್ಯಕ್ರಮದ ಅಂಗವಾಗಿ ಭಟ್ಕಳದ ಸೋನಾರಕೇರಿಯ ಕೆರೆಯ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ ಭಟ್ಕಳ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಕ್ಷೇತ್ರ ಪ್ರಭಾರಿ ಚಂದ್ರು ಎಸಳೆ, ಪರಿಸರ ಸ್ನೇಹಿ ಅಭಿಯಾನದ ಜಿಲ್ಲಾ ಸಂಚಾಲಕ ನಾಗರಾಜ್ ತೊರ್ಕೆ, ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ, ಯುವಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಹಿಂದುಳಿದ ಮೋರ್ಚಾದ ಜಿಲ್ಲಾಧ್ಯಕ್ಷ  ರವಿ ನಾಯ್ಕ ಜಾಲಿ, ಮಾಜಿ ಸೈನಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀಕಾಂತ ನಾಯ್ಕ,  ಕಾನೂನು ಪ್ರಕೋಷ್ಟಾದ ಜಿಲ್ಲಾ ಸಂಚಾಲಕ ಸುರೇಶ್ ನಾಯ್ಕ, ನಗರ ಮಹಾಶಕ್ತಿ ಕೇಂದ್ರದ  ಅಧ್ಯಕ್ಷ ವೆಂಕಟೇಶ್ ನಾಯ್ಕ್, ಎಸ್.ಟಿ. ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಚಂದ್ರು ಗೊಂಡ, ಕಾರ್ಮಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಮುಕುಂದ್ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶ್ರೇಯಾ ಮಹಾಲೆ, ಮಂಡಲದ ಪ್ರಧಾನ ಕಾರ್ಯದರ್ಶಿ  ಭಾಸ್ಕರ್ ದೈಮನೆ, ಮೋಹನ್  ನಾಯ್ಕ,  ಪ್ರಮುಖರಾದ ಲಕ್ಷ್ಮೀ ನಾಯ್ಕ, ಪಾಂಡುರಂಗ ನಾಯ್ಕ, ಸಚಿನ್ ಮಹಾಲೆ, ಸಂದೀಪ್ ಶೇಟ್, ವೆಂಕಟೇಶ್ ನಾಯ್ಕ, ವಿವೇಕ ನಾಯ್ಕ, ಮಂಡಲದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವೀಶ್ ನಾಯ್ಕ. ಕಿರಣ ನಾಯ್ಕ್. ಉಪಾಧ್ಯಕ್ಷ  ಜಯಂತ ನಾಯ್ಕ. ಈಶ್ವರ ನಾಯ್ಕ. ಕಾರ್ಯದರ್ಶಿ ರಾಘು ನಾಯ್ಕ. ವಿನೋದ್ ದೇವಡಿಗ. ಉಮೇಶ ನಾಯ್ಕ. ವಿವೇಕ ದೇವಡಿಗ. ವೆಂಕಟೇಶ ನಾಯ್ಕ. ಯಶವಂತ ನಾಯ್ಕ್. ರವಿಕೃಷ್ಣ ಆಚಾರ್ಯ, ಯುವಮೋರ್ಚಾ ಸದಸ್ಯರು ಹಾಗೂ  ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News