ಕುಂದಾಪುರ: ಆಶಾ ಕಾರ್ಯಕರ್ತೆ ನಾಪತ್ತೆ

Update: 2021-09-24 15:33 GMT

ಕುಂದಾಪುರ, ಸೆ.24: ಆಶಾ ಕಾರ್ಯಕರ್ತೆ, ದೇವಲ್ಕುಂದ ಗ್ರಾಮದ ಬಾಳಿಕೆರೆಯ ನಿವಾಸಿ ಶ್ರೀಮತಿ ಎಂಬವರು ಸೆ.24ರಂದು ಬೆಳಗ್ಗೆ ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ.

ಮಾನಸಿಕವಾಗಿ ನೊಂದಿರುವುದಾಗಿ ಸ್ನೇಹಿತರಿಗೆ ಸಂದೇಶ ಕಳುಹಿಸಿರುವ ಇವರು, ಮೊಬೈಲ್ ಸ್ವಿಚ್‌ಆಫ್ ಮಾಡಿದ್ದಾರೆ. ಈ ಬಗ್ಗೆ ಮನೆಯವರು ಹುಡುಕಾಡಿದರೂ ಪತ್ತೆಯಾಗಿಲ್ಲ. ದಪ್ಪ ಶರೀರ, ಕಪ್ಪು ಮೈಬಣ್ಣ, 4.5ಅಡಿ ಎತ್ತರ ಹೊಂದಿರುವ ಇವರು, ಕನ್ನಡ ಬಾಷೆ ಮಾತಾಡುತ್ತಾರೆ. ಚೂಡಿದಾರ ಧರಿಸಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News