ಮಂಗಳೂರು: ಗುಜರಾತ್ ಬಂದರಿನಲ್ಲಿ ಹೆರಾಯಿನ್ ಪತ್ತೆ ಬಗ್ಗೆ ಪ್ರಶ್ನೆಗೆ ಉತ್ತರ ನೀಡದೆ ತೆರಳಿದ ಕೇಂದ್ರ ಸಚಿವ ಸೋನೊವಾಲ್

Update: 2021-09-24 16:06 GMT

ಮಂಗಳೂರು, ಸೆ.24:ಗುಜರಾತಿನ ಅದಾನಿ ಬಂದರಿನಲ್ಲಿ ಸುಮಾರು 20 ಸಾವಿರ ಕೋಟಿ ಮೌಲ್ಯದ ಹೆರಾಯಿನ್ ಪತ್ತೆಯಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಕೇಂದ್ರ ಬಂದರು, ಹಡಗು, ಜಲ ಸಾರಿಗೆ ಮತ್ತು ಆಯುಷ್ ಇಲಾಖೆಯ ಸಚಿವ ಸರ್ಬಾನಂದ ಸೋನೊವಾಲ್ ಯಾವುದೇ ಉತ್ತರ ನೀಡದೆ ತೆರಳಿದ್ದಾರೆ.

ಅವರು ಇಂದು ನವ ಮಂಗಳೂರು ಬಂದರು ಮಂಡಳಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ನವಮಂಗಳೂರು ಬಂದರಿನ ಬಳಿ ಮುಳುಗಿರುವ ಹಡಗಿನ ಅವಶೇಷಗಳನ್ನು ತೆರವು ಮಾಡುವ ಬಗ್ಗೆ ಸಚಿವರ ಬಳಿ ಪ್ರಶ್ನಿಸಿದಾಗ, ನಾನು ಪ್ರಥಮ ಬಾರಿಗೆ ಮಂಗಳೂರು ಬಂದರನ್ನು ವೀಕ್ಷಿಸಿದ್ದೇನೆ. ಈ ಸಮಸ್ಯೆ ಪರಿಹಾರಕ್ಕೆ ಮೀನುಗಾರರ ಸಹಕಾರ ಬೇಕು ಇನ್ನೊಂದು ಬಾರಿ ಭೇಟಿ ನೀಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News