ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್‌ಗೆ ನುಡಿ ನಮನ

Update: 2021-09-26 11:38 GMT

ಮಂಗಳೂರು, ಸೆ.26: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರಿಗೆ ನುಡಿ ನಮನ ಕಾರ್ಯಕ್ರಮವು ರವಿವಾರ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ ದಿ.ಆಸ್ಕರ್ ಫೆರ್ನಾಂಡಿಸ್‌ರನ್ನು ಕಾಂಗ್ರೆಸ್ಸಿಗರು ಮಾತ್ರವಲ್ಲದೆ, ಇತರ ಪಕ್ಷದ ನಾಯಕರು ಕೂಡ ಗೌರವದಿಂದ ಕಾಣುತ್ತಿದ್ದರು. ಅವರೊಬ್ಬ ಸಮರ್ಥ ನಾಯಕ. ಅವರ ಅಗಲಿಕೆಯು ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರಿಗೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಅವರ ಮನಸು ಸದಾ ತುಡಿಯುತ್ತಿತ್ತು. ಅವರು ಎಂದಿಗೂ ಮಂತ್ರಿಗಿರಿ ಸ್ಥಾನ ಬೇಕು ಎಂದು ಹಂಬಲಿಸಲಿಲ್ಲ. ಪಕ್ಷದ ವಿವಿಧ ಹಂತಗಳಲ್ಲಿ ದುಡಿದು, ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಮರೆಯಾದರು ಎಂದರು.

ದಕ್ಷಿಣ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹೊನ್ನಯ್ಯ, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲ್ಯಾನ್, ಅಬ್ದುಲ್ ಸಲಿಂ, ಪ್ರಭಾಕರ್ ಶ್ರೀಯಾನ್, ಮಾಜಿ ಮೇಯರ್ ಮಹಾಬಲ ಮಾರ್ಲ, ಮನಪಾ ವಿಪಕ್ಷ ನಾಯಕ ಎಸಿ ವಿನಯರಾಜ್, ವಿಶ್ವಾಸ್‌ಕುಮಾರ್ ದಾಸ್, ನವೀನ್ ಡಿಸೋಜಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‌ಗಳಾದ ಅಬ್ದುಲ್ಲತೀಫ್, ಪ್ರವೀಣ್‌ಚಂದ್ರ ಆಳ್ವ, ಕೇಶವ ಮರೋಳಿ, ಅಶ್ರಫ್ ಬಜಾಲ್, ಪಕ್ಷದ ಪ್ರಮುಖರಾದ ಟಿ.ಕೆ. ಸುಧೀರ್, ಸದಾಶಿವ ಅಮೀನ್, ಕವಿತಾ ವಾಸು, ಶಾಂತಳಾ ಗಟ್ಟಿ, ಸದಾಶಿವ ಕುಲಾಲ್, ರಮಾನಂದ ಪೂಜಾರಿ ಶೈಲಜಾ, ಸುನೀಲ್ ಕುಮಾರ್, ರಾಕೇಶ್ ದೇವಾಡಿಗ, ಉಮೇಶ್ ದೇವಾಡಿಗ, ಸವಾನ್ ಎಸ್.ಕೆ., ಚೇತನ್ ಉರ್ವ, ಆಸೀಫ್ ಬೆಂಗ್ರೆ, ಗಣೇಶ ಉರ್ವ, ಭಾಸ್ಕರ್ ರಾವ್, ಗೀತಾ ಅತ್ತಾವರ, ಚಂದ್ರಕಲಾ, ವಿದ್ಯಾ, ಬಾನೆಟ್ ಡಿಮೇಲ್ಲೋ, ಶರತ್ ಬೋಳಾರ್, ಸಮರ್ಥ ಭಟ್, ಯೋಗೇಶ್ ನಾಯಕ್, ಲಕ್ಷ್ಮಣ್ ಶೆಟ್ಟಿ, ದಿನೇಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News