ಬಂದ್‌ಗೆ ಬೆಂಬಲವಿಲ್ಲ: ಬಸ್ ಮಾಲಕರ ಸಂಘಗಳ ಒಕ್ಕೂಟ

Update: 2021-09-26 11:59 GMT

ಉಡುಪಿ, ಸೆ.26: ರಾಜ್ಯದ ಬೇರೆ ಬೇರೆ ಸಂಘಟನೆಗಳು ಕರೆದಿರುವ ಕರ್ನಾಟಕ ಬಂದ್ಗೆ ರಾಜ್ಯ ಬಸ್ ಮಾಲಕರ ಸಂಘಗಳ ಒಕ್ಕೂಟದ ಬೆಂಬಲವಿಲ್ಲ. ಯಥಾ ಸ್ಥಿತಿಯಂತೆ ಬಸ್ ಸಂಚಾರ ಇರುತ್ತದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ತಿಳಿಸಿದ್ದಾರೆ.

ಈಗಾಗಲೇ ಕೊರೋನಾ 1 ಮತ್ತು 2ರ ಬಂದ್‌ನಿಂದ ಬಸ್ ಉದ್ಯಮ ಸೊರಗಿ ಹೋಗಿದೆ. ಯಾವುದೇ ಕಾರಣಕ್ಕೂ ಬಸ್ ಬಂದ್ ಮಾಡುವ ಸ್ಥಿತಿಯಲ್ಲಿ ನಾವಿಲ್ಲ. ಈಗ ಬಸ್ ಉದ್ಯಮ ಸ್ವಲ್ಪಚೇತರಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ಪುನಃ ಬಂದ್ ಮಾಡುವ ಪ್ರಶ್ನೆ ನಮ್ಮ ಮುಂದಿಲ್ಲ. ನಮ್ಮನ್ನು ಯಾವುದೇ ಸಂಘಟನೆಗಳು ಇನ್ನು ಮುಂದೆ ಬಂದ್‌ಗಾಗಿ ಕೇಳಿಕೊಳ್ಳಬಾರದು ಮತ್ತು ಅದನ್ನು ಬೆಂಬಲಿಸುವ ಪ್ರಶ್ನೆ ನಮ್ಮಲ್ಲಿ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News