ಕಲ್ಮಿಂಜ: ತಾಜುಲ್ ಫುಖಹಾಅ್ ಪ್ರಥಮ ಆಂಡ್ ನೇರ್ಚೆ
Update: 2021-09-28 18:07 GMT
ನರಿಂಗಾನ: ಕಲ್ಮಿಂಜದ ಬದ್ರಿಯಾ ಜಮಾ ಮಸೀದಿ, ಎಸ್ ವೈ ಎಸ್ ಹಾಗೂ ಎಸ್ಸೆಸ್ಸೆಫ್ ನ ಜಂಟಿ ಆಶ್ರಯದಲ್ಲಿ ಬೇಕಲ್ ಉಸ್ತಾದ್ ಅವರ ಪ್ರಥಮ ಆಂಡ್ ನೇರ್ಚೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷರಾದ ಖಾಲಿದ್ ಮದನಿ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ವಹಿಸಿದ್ದ ಸ್ಥಳೀಯ ಖತೀಬ್ ಅಬ್ದುಲ್ ರಹ್ಮಾನ್ ಸಖಾಫಿ ಚಿಪ್ಪಾರ್ ಮಾತನಾಡಿ, ಸಯ್ಯಿದ್ (ಅಹ್ಲ್ ಬೈತಿನ) ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಪದಾಧಿಕಾರಿಗಳು, ಎಸ್ ವೈ ಎಸ್ ಹಾಗೂ ಎಸ್ಸೆಸ್ಸೆಫ್ ನಾಯಕರು ಮತ್ತು ಕಾರ್ಯಕರ್ತರು ಹಾಗೂ ಊರಿನ ಹಿರಿಯರು ಭಾಗವಹಿಸಿದ್ದರು.
ಈ ಸಂದರ್ಭ ಜಮಾಅತ್ ಹಾಗೂ ಎಸ್'ವೈಎಸ್, ಎಸ್ಸೆಸ್ಸೆಫ್ ವತಿಯಿಂದ ಕುಂಬೋಳ್ ತಂಙಳ್ ರವರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಮಸೀದಿ ಅಧೀನದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಶೌಚಾಲಯದ ಕಾಮಗಾರಿಗೆ ಎಸ್ಸೆಸ್ಸೆಫ್ ವತಿಯಿಂದ 20,000 ರೂ. ಧನ ಸಹಾಯವನ್ನು ತಂಙಳ್ ಮುಖಾಂತರ ನೀಡಲಾಯಿತು.