ಕಾರ್ಮಿಕ ಆತ್ಮಹತ್ಯೆ
Update: 2021-10-01 21:04 IST
ಉಡುಪಿ, ಅ.1: ಮದ್ಯಸೇವನೆಯ ಚಟದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಾರ್ಮಿಕ, ಶೃಂಗೇರಿ ಬೇಗಾರು ಗ್ರಾಮದ ನಿವಾಸಿ ಶಾಂತಮ್ಮ ಎಂಬವರ ಮಗ ಸಂತೋಷ್ ಎಚ್.ಬಿ.(34) ಎಂಬವರು ಸೆ.30ರಂದು ಸಂಜೆ ಉಡುಪಿ ಅಜ್ಜರ ಕಾಡುವಿನ ಹುತಾತ್ಮ ಸೈನಿಕರ ಸ್ಮಾರಕದ ಹಿಂಬದಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.