×
Ad

ಮಂಗಳೂರು: ಸಮುದ್ರಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

Update: 2021-10-02 18:58 IST

ಮಂಗಳೂರು, ಅ.2: ಕಡಲ ವಿಹಾರಕ್ಕೆಂದು ಪಣಂಬೂರು ಕಡಲ ತೀರಕ್ಕೆ ಬಂದಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಿಸುವಲ್ಲಿ ಕಡಲ ಜೀವರಕ್ಷರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಮತ್ತಿಕೆರೆಯ ಪ್ರಸಾದ್ (20), ರಕ್ಷಿತ್ (20) ರಕ್ಷಣೆಗೊಳಗಾದವರು.

ವಾರಾಂತ್ಯದಲ್ಲಿ ಮಂಗಳೂರು ಪ್ರವಾಸಕ್ಕೆ ಬಂದಿದ್ದ ಯುವಕರು ಶನಿವಾರ ಸಂಜೆ ವೇಳೆಗೆ ಪಣಂಬೂರು ಸಮುದ್ರಕ್ಕೆ ಇಳಿದಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ಯುವಕರನ್ನು ಕಾರ್ಯಾಚರಣೆ ನಡೆಸಿ ಜೀವರಕ್ಷಕ ಪಡೆ ರಕ್ಷಣೆ ಮಾಡಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News