ಅಂತರಾಜ್ಯ ಕಳವು ಆರೋಪಿಗಳ ಬಂಧನ: 5 ಬೈಕ್ ವಶ

Update: 2021-10-02 16:41 GMT

ಗಂಗೊಳ್ಳಿ, ಅ.2: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರ್ ರಾಜ್ಯ ಕಳವು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಅ.1ರಂದು ಬಂಧಿಸಿದ್ದಾರೆ.

ಗದಗ ಮೂಲದ ಫಕ್ರುದ್ದೀನ್(22) ಮತ್ತು ಕಿರಣ ಶರಣಪ್ಪ ಕುಂಬಾರ(19) ಬಂಧಿತ ಆರೋಪಿಗಳು, ಆರೋಪಿಗಳಿಂದ ರಾಜ್ಯದ ವಿವಿದೆಡೆಗಳಲ್ಲಿ ಕಳವು ಮಾಡಿದ ಐದು ಬೈಕ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಉಡುಪಿ ಎಸ್ಪಿ ವಿಷ್ಣುವರ್ಧನ್ ನಿರ್ದೇಶನದಲ್ಲಿ ಬೈಂದೂರು ವೃತ್ತನೀರಿಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಎಸ್ಸೈ ನಂಜಾ ನಾಯ್ಕ ಮತ್ತು ಸಿಬ್ಬಂದಿಗಳು ಈ ಕಾಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News