ದೇರಳಕಟ್ಟೆ: ಹ್ಯೂಮಾನಿಟಿ ಫೌಂಡೇಶನ್ ವತಿಯಿಂದ ಉಚಿತ ಪುಸ್ತಕ ವಿತರಣೆ

Update: 2021-10-03 16:26 GMT

ದೇರಳಕಟ್ಟೆ: ಹ್ಯೂಮಾನಿಟಿ ಪೌಂಡೇಷನ್ ಮಂಗಳೂರು ಇದರ ವತಿಯಿಂದ ನರಿಂಗಾನ ಗ್ರಾಮದ ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಸಂಸ್ಥೆಯ ಅಧ್ಯಕ್ಷ ನಾಸೀರ್ ಸಾಮಣಿಗೆ, ಪ್ರಧಾನ ಕಾರ್ಯದರ್ಶಿ ಹಮೀದ್ ಪಜೀರ್, ಶಾಲೆಯ ಮುಖ್ಯೋಪಾಧ್ಯಾಯಿನಿ ಸೀಮಾ ಮರಿಯಾ ಡಿ.ಸೊಜ  ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಕೋಶಾಧಿಕಾರಿ ಇಲ್ಯಾಸ್  ಚಾರ್ಮಾಡಿ, ಸಂಚಾಲಕರಾದ ಶಂಶೀರ್ ಕುತ್ತಾರ್, ಅಝೀಝ್ ಮದ್ಪಾಡಿ, ಅಧ್ಯಾಪಕರಾದ ವಿನಿತ, ಪುಷ್ಪ, ಸಂತೊಷ್ ಉಪಸ್ಥಿತರಿದ್ದರು.

ಶಾಲಾ ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು, ದೈಹಿಕ‌ ಶಿಕ್ಷಕ ಪ್ರಭಾಕರ್ ರವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News