×
Ad

ಕಾರಾಜೆ: ಎಂ.ಎನ್.ಜಿ. ಫೌಂಡೇಶನ್ ನಿಂದ ಮನೆ ಕೊಡುಗೆ

Update: 2021-10-04 11:14 IST

ವಿಟ್ಲ, ಅ.4: ಎಂ.ಎನ್.ಜಿ. ಫೌಂಡೇಶನ್ ಸಂಸ್ಥೆಯ 'ಮನೆ ನಿರ್ಮಿಸಲು ಅಸಾಧ್ಯವಾದ ಕುಟುಂಬಕ್ಕೊಂದು ಮನೆ' ಯೋಜನೆಯ ಪ್ರಥಮ ಮನೆ 'ಎಂ.ಎನ್.ಜಿ. ಮಹಲ್'ನ್ನು  ಬಂಟ್ವಾಳ ಕಾರಾಜೆಯ ಬಡ ಮಹಿಳೆಯೊಬ್ಬರಿಗೆ ಹಸ್ತಾಂತರಿಸಲಾಯಿತು.

ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬ್ ಸೈಯದ್ ಯಹ್ಯಾ ತಂಙಳ್ ಮದನಿ ದುಆ ಆಶೀರ್ವಚನಗೈದರು. ಇರ್ಷಾದ್ ದಾರಿಮಿ ಅಲ್-ಜಝರಿ ಮನೆಯನ್ನು ಉದ್ಘಾಟಿಸಿದರು,

 ಎಂ.ಎನ್.ಜಿ. ಫೌಂಡೇಶನ್ ಹಿರಿಯ ಸದಸ್ಯ ಪಿ.ಬಿ.ಕೆ.ಮುಹಮ್ಮದ್ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು.

    ಇದೇ ವೇಳೆ ವಿವಿಧ ಸಮಾಜ ಸೇವಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಸಾಧಕರಾದ ಸಲೀಂ ಯು.ಕೆ. ಉಪ್ಪಿನಂಗಡಿ ಹಾಗೂ ಶಬಾನ ಕಾವಲಕಟ್ಟೆಯವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾರಾಜೆ ಪಡ್ಪು ಜುಮಾ ಮಸೀದಿ ಖತೀಬರಾದ ಅಬೂಬಕರ್ ಯಮಾನಿ, ಉಮ್ಮಗೊರು ಅಗ ಇದರ ಅಧ್ಯಕ್ಷರಾದ ಮುಸ್ತಫಾ ದೆಮ್ಮಲೆ, ಕಾರಾಜೆ ಪಡ್ಪು ಜುಮಾ ಮಸೀದಿಯ ಅಧ್ಯಕ್ಷ ಬಿ.ಎ.ಉಸ್ಮಾನ್ ಕಾರಾಜೆ, ಉದ್ಯಮಿ ಮುಬಾರಕ್ ಕಾರಾಜೆ, ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಶೇಕಬ್ಬ, ಎಂ.ಎನ್.ಜಿ. ಫೌಂಡೇಶನ್ ಸಲಹಾ ಸಮಿತಿಯ ಮುಖ್ಯಸ್ಥರಾದ ಅಲ್ತಾಫ್ ಬೋಳಾರ್, ಎಂ.ಎಂ.ಮೋನು ನಂದಾವರ ಹಾಗೂ ಇಸ್ಹಾಕ್ ತುಂಬೆ ಮೊದಲಾದವರು ಉಪಸ್ಥಿತರಿದ್ದರು

   ಸಂಸ್ಥೆಯ ಸ್ಥಾಪಕ ಇಲ್ಯಾಸ್ ಮಂಗಳೂರು, ಪದಾಧಿಕಾರಿಗಳಾದ ಮನ್ಸೂರ್ ಬಿ.ಸಿ.ರೋಡ್, ಸಿದ್ದೀಕ್ ಕೊಳಕೆ, ಬಶೀರ್ ಪರ್ಲಡ್ಕ, ಶಮೀರ್ ಪರ್ಲಿಯಾ, ಶಾಕಿರ್ ಪಾವೂರು, ಮುಖ್ತಾರ್ ಅಕ್ಕರಂಗಡಿ, ಜಲೀಲ್ ಉಪ್ಪಿನಂಗಡಿ, ಸದಸ್ಯರಾದ ಅಲಿ ಪರ್ಲಡ್ಕ, ಜಲೀಲ್ ಕಲ್ಲಡ್ಕ ದುಬೈ, ಅಶ್ರಫ್ ಮಲ್ಲಿ, ಫೈಝಲ್ ಸಂತೋಷ್ ನಗರ, ಅಬೂಬಕರ್ ಆ್ಯಂಬುಲೆನ್ಸ್, ಇಸ್ಮಾಯೀಲ್ ಅರಬಿ ಹಾಗೂ ಬಾಸಿತ್ ತುಂಬೆ ಭಾಗವಹಿಸಿದ್ದರು.

ನಕಾಶ್ ಬಾಂಬಿಲ ಸ್ವಾಗತಿಸಿದರು. ಇಮ್ತಿಯಾಝ್ ಕೆದುಂಬಾಡಿ (ಗುಜರಾತ್) ವಂದಿಸಿದರು. ರಫೀಕ್ ಪರ್ಲಿಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News