×
Ad

ಗಂಗೊಳ್ಳಿ ಪ್ರತಿಭಟನೆಯಲ್ಲಿ ಅವಹೇಳನಕಾರಿ ಘೋಷಣೆ: ಮೂವರು ಹಿಂಜಾವೇ ಕಾರ್ಯಕರ್ತರ ಬಂಧನ

Update: 2021-10-04 12:15 IST
ಗಂಗೊಳ್ಳಿಯಲ್ಲಿ ಅ.1ರಂದು ಹಿಂದೂ ಜಾಗರಣಾ ವೇದಿಕೆಯು ಗೋಹತ್ಯೆ ವಿರೋಧಿ ಪ್ರತಿಭಟನೆ ನಡೆಸಿತ್ತು. (ಫೈಲ್ ಫೋಟೋ)

ಉಡುಪಿ, ಅ.4: ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಅ.1ರಂದು ಗಂಗೊಳ್ಳಿಯಲ್ಲಿ ನಡೆದ ಗೋಹತ್ಯೆ ವಿರೋಧಿ ಪ್ರತಿಭಟನೆಯಲ್ಲಿ ಪ್ರವಾದಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗಿದ ಆರೋಪದಡಿ ಮೂವರು ಹಿಂಜಾವೇ ಕಾರ್ಯಕರ್ತರನ್ನು ಗಂಗೊಳ್ಳಿ ಪೊಲೀಸರು ಅ.3ರಂದು ಬಂಧಿಸಿದ್ದಾರೆ.

ಹಿಂಜಾವೇ ಕಾರ್ಯಕರ್ತರಾದ ನವೀನ್, ಅಂಬರೀಶ್ ಹಾಗೂ ಪರ್ವಿಶ್ ಬಂಧಿತ ಆರೋಪಿಗಳು. ಇವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅದೇ ರೀತಿ ಈ ಪ್ರತಿಭಟನೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಜನ ಸೇರಿಸಿದ ಆರೋಪದಡಿ ಹಿಂಜಾವೇ ಮುಖಂಡರಾದ ಅಕ್ಷಯ್, ವಿವೇಕ್, ರಾಘವೇಂದ್ರ, ಅಕ್ಷಯ್ ಹಾಗೂ ಮಹೇಶ್ ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸೆ.28ರಂದು ಅನುಮತಿ ಪಡೆಯದೇ ಸಭೆ ಸೇರಿಸಿದ ಆರೋಪದಡಿ ಮಜೀದ್, ಇಫ್ತಿಕಾರ್ ಹಾಗೂ ತಬೀಶ್ ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇವರಿಗೆಲ್ಲ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News