ಅಪಹರಣಕ್ಕೊಳಗಾದ ಮೀನು ವ್ಯಾಪಾರಿ ಪತ್ತೆ

Update: 2021-10-04 15:57 GMT

ಮಲ್ಪೆ, ಅ.4: ಹಣದ ವಿಚಾರವಾಗಿ ಕೇರಳಕ್ಕೆ ಅಪಹರಿಸಿಕೊಂಡು ಹೋಗ ಲಾಗಿದೆ ಎನ್ನಲಾದ ಮಲ್ಪೆ ಮೀನು ಲಾರಿಯ ಚಾಲಕ ಚಿಕ್ಕಮಗಳೂರು ಕೊಪ್ಪದ ಸುಲೈಮಾನ್ ಎಂಬವರನ್ನು ಮಲ್ಪೆ ಪೊಲೀಸರು ಕೇರಳದಲ್ಲಿ ಪತ್ತೆ ಹಚ್ಚಿದ್ದಾರೆ.

ಚಾಲಕ ವೃತ್ತಿ ಜೊತೆಗೆ ಮೀನಿನ ವ್ಯವಹಾರ ನಡೆಸುತ್ತಿದ್ದ ಸುಲೈಮಾನ್‌ರನ್ನು ಅ.1ರಂದು ಮಲ್ಪೆಯಿಂದ ಕೇರಳಕ್ಕೆ ಅಪಹರಣ ಮಾಡಿ, 15ಲಕ್ಷ ರೂ. ಹಣ ನೀಡುವಂತೆ ಅಪಹರಣಕಾರರು ಬೇಡಿಕೆಯೊಡ್ಡಿದ್ದಾರೆಂದು ಅವರ ಸಹೋದರ ಸಂಶುದ್ದೀನ್ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಮಲ್ಪೆ ಪೊಲೀಸರು, ಕೇರಳಕ್ಕೆ ತೆರಳಿ ಸುಲೈಮಾನ್ ಅವರನ್ನು ಪತ್ತೆ ಹಚ್ಚಿ ವಾಪಾಸ್ಸು ಕರೆದುಕೊಂಡು ಬರುತ್ತಿದ್ದಾರೆ ನ್ನಲಾಗಿದೆ. ಇವರನ್ನು ಕೇರಳಕ್ಕೆ ಕರೆದುಕೊಂಡು ಹೋಗಿರುವ ವ್ಯಕ್ತಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News