ಪಂಜಾಬ್ ನಿಂದ ಉತ್ತರಪ್ರದೇಶದ ಲಖಿಂಪುರ ಖೇರಿಗೆ ನಾಳೆ ಕಾಂಗ್ರೆಸ್ ನಿಂದ ಪಾದಯಾತ್ರೆ: ನವಜೋತ್ ಸಿಧು

Update: 2021-10-06 13:22 GMT

ಮೊಹಾಲಿ:ರೈತರ ಹತ್ಯೆಯನ್ನು ವಿರೋಧಿಸಿ ಪಂಜಾಬ್‌ನ ಮೊಹಾಲಿಯಿಂದ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಗುರುವಾರ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಸಿಧು ಅವರ ಕಛೇರಿಯು ನೀಡಿದ ಹೇಳಿಕೆಯ ಪ್ರಕಾರ ಸಿಧು ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ.

ಹರ್ಯಾಣ ಕಾಂಗ್ರೆಸ್ ನಿಂದಲೂ ಪಾದಯಾತ್ರೆ

ಲಖಿಂಪುರ ಖೇರಿ ಘಟನೆಯಲ್ಲಿ ಅಮಾಯಕ ಜೀವಗಳು ಹತ್ಯೆಗೀಡಾಗಿರುವುದರ ವಿರುದ್ಧ ಪ್ರತಿಭಟಿಸಲು ಹರ್ಯಾಣ ಕಾಂಗ್ರೆಸ್ ಗುರುವಾರ ಉತ್ತರ ಪ್ರದೇಶಕ್ಕೆ ಪಾದಯಾತ್ರೆ ಮಾಡುವುದಾಗಿ ಘೋಷಿಸಿದೆ.

ಪಕ್ಷದ ರಾಜ್ಯ ಘಟಕವು ತನ್ನ ಕಾರ್ಯಕರ್ತರನ್ನು ಗುರುವಾರ ಬೆಳಿಗ್ಗೆ 8 ಗಂಟೆಗೆ ಪಾಣಿಪತ್‌ನ ಸಂಜಯ್ ಚೌಕ್‌ನಲ್ಲಿ ಒಟ್ಟುಗೂಡಿಸಲು ಕರೆ ನೀಡಿದೆ. ಅಲ್ಲಿಂದ ಅವರು ಒಟ್ಟಾಗಿ ಉತ್ತರಪ್ರದೇಶಕ್ಕೆ ತೆರಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News