ಕಾರ್ಕಳ: ರಸ್ತೆ ಹೊಂಡದಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

Update: 2021-10-06 16:26 GMT

ಕಾರ್ಕಳ ; ಕಾರ್ಕಳ‌ ಪುರಸಭೆ ವ್ಯಾಪ್ತಿಯ ಮೂರು ಮಾರ್ಗ  ಬಳಿ  ಮಂಗಳೂರಿಗೆ ತೆರಳುವ ರಸ್ತೆ  ಸಂಪೂರ್ಣ ಕೆಟ್ಟು‌ ಹೋಗಿದ್ದು, ಇದರಿಂದ ಮನನೊಂದ ನಗರದ  ರಿಕ್ಷಾ ಚಾಲಕರೋರ್ವರು ಬುಧವಾರ  ರಸ್ತೆ ಹೊಂಡದಲ್ಲಿ  ಬಾಳೆ ಗಿಡನೆಟ್ಟು ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಈ ರಸ್ತೆ  ಮಂಗಳೂರು ಕಡೆಗೆ  ಸಂಪರ್ಕ  ಬೆಸೆಯುವ ರಸ್ತೆಯಾಗಿದೆ. ಒಳಚರಂಡಿ ಕಾಮಗಾರಿಯ ಸಂದರ್ಭ ಡಾಮಾರು  ರಸ್ತೆ ಹಾನಿಯಾಗಿತ್ತು. ಅನಂತರ  ದುರಸ್ತಿ ಆಗಾಗ ಪಡಿಸಲಾಗುತಿತ್ತು. ಅದೆಲ್ಲ  ತಾತ್ಕಾಲಿಕವಾಗಿಯೆ ನಡೆಯುಯಿತ್ತು. ದಿನ ಕಳೆಯುತ್ತ ಬಂದಂತೆ ರಸ್ತೆ ಪೂರ್ತಿ ಹೊಂಡಗಳೆ ತುಂಬಿ ವಾಹನ ಸಂಚಾರ, ಕಾಲ್ನಡಿಗೆಯಲ್ಲೂ ತೆರಳಲು ಸಾದ್ಯವಾಗುತಿಲ್ಲ. ಇಷ್ಟೆಲ್ಲ ಆಗುತಿದ್ದರೂ  ಪುರಸಭೆ ಅಧಿಕಾರಿಗಳು ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ. ರಸ್ತೆಯ ಹೊಂಡಕ್ಕೆ ಮುಕ್ತಿ ನೀಡುವ ಬಗ್ಗೆ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಗಮನಕೊಡುತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News