ಸರಕಾರ ವೈಫಲ್ಯ ಮರೆಮಾಚಲು ಸೌಹಾರ್ದತೆ ಕೆಡಿಸುವ ಯತ್ನ: ಎಚ್.ನರಸಿಂಹ

Update: 2021-10-11 14:41 GMT

ಬೈಂದೂರು, ಅ.11: ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ವೈಫಲ್ಯ ಮರೆಮಾಚಲು ತನ್ನ ಅಂಗ ಸಂಘಟನೆಗಳಿಂದಲೇ ಜನರ ವಿರುದ್ಧ ಪ್ರತಿಭಟನೆ ಗಳನ್ನು ನಡೆಸಿ ಸೌಹಾರ್ದತೆ ಕೆಡಿಸುವ ಪ್ರಯತ್ನ ಮಾಡಿ ಜನರ ನೈಜ ಸಮಸ್ಯೆಗಳನ್ನು ಮಾತನಾಡ ದಂತೆ ಮಾಡುತ್ತಿದೆ ಎಂದು ಸಿಪಿಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್.ನರಸಿಂಹ ಆರೋಪಿಸಿದರು.

ಗ್ರೀನ್ ಲ್ಯಾಂಡ್ ಕಾರ್ಖಾನೆಯ ವಠಾರದ ಬಳಿ ರವಿವಾರ ನಡೆದ ಬೈಂದೂರು ವಲಯ ಸಮಿತಿ ಅಡಿಯಲ್ಲಿರುವ ಗ್ರೀನ್ ಲ್ಯಾಂಡ್ ಕಾರ್ಖಾನೆಯ ಕಾರ್ಮಿಕರ ಸಿಪಿಐ(ಎಂ) ಶಾಖಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತಿದ್ದರು.

ಧ್ವಜಾರೋಹಣವನ್ನು ಕಾರ್ಖಾನೆ ಕಾರ್ಮಿಕ ಹಾಗೂ ಪಕ್ಷದ ಹಿರಿಯ ಸದಸ್ಯ ಎಚ್.ನರಸಿಂಹ ಪೂಜಾರಿ ನೆರವೇರಿಸಿದರು. ಸಮ್ಮೇಳನವನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News