ರಾಜ್ಯ ಈಜುಕೂಟ: ಬೆಂಗ್ರೆಯ ಆನಂದ ಅಮೀನ್‌ಗೆ ಚಿನ್ನ ಸಹಿತ ಮೂರು ಪದಕ

Update: 2021-10-12 17:44 GMT

ಮಂಗಳೂರು, ಅ.12: ಬೆಂಗಳೂರಿನಲ್ಲಿ ವಿಜಯನಗರ ಅಕ್ವೆಟಿಕ್ ಸೆಂಟರ್‌ನಲ್ಲಿ ಇತ್ತೀಚೆಗೆ ಸಮಾರೋಪಗೊಂಡ 22ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಈಜುಕೂಟ ಪಂದ್ಯಾವಳಿಯಲ್ಲಿ ಬೆಂಗ್ರೆ ಆನಂದ ಅಮೀನ್ ಮೂರು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಈಜುಕೂಟದಲ್ಲಿ ಅಮೀನ್ 50 ಮೀಟರ್ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ ಫ್ರೀ ಸ್ಟೈಲ್, 50 ಮೀಟರ್ ರಿಲೇಯಲ್ಲಿ ಚಿನ್ನ ಗೆದ್ದುಕೊಂಡಿದ್ದು, 50 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಉತ್ತಮ ಕುಸ್ತಿಪಟು ಮತ್ತು ಕುಸ್ತಿ ಹಾಗೂ ಈಜು ತರಬೇತುದಾರರು ಕೂಡ ಆಗಿರುವ ಆನಂದ ಅಮೀನ್ ಅವರು ಸತತವಾಗಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ 500ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಅವರು ಕೆನರಾ ಬ್ಯಾಂಕ್ ಮಿಷನ್ ಸ್ಟ್ರೀಟ್ ಶಾಖೆಯಲ್ಲಿ ಹಿರಿಯ ಉದ್ಯೋಗಿಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News