ಮಲ್ಪೆ: ಸಮುದ್ರದಲ್ಲಿ ಮುಳುಗುತಿದ್ದ ಮೂವರ ರಕ್ಷಣೆ

Update: 2021-10-14 15:18 GMT

ಮಲ್ಪೆ, ಅ.14: ಉಡುಪಿ ಪ್ರವಾಸಕ್ಕೆಂದು ಬಂದು ಗುರುವಾರ ಸಂಜೆ ಮಲ್ಪೆಯ ಅರಬಿಸಮುದ್ರದಲ್ಲಿ ನೀರಾಟವಾಡುತಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತಿದ್ದ ಮೂವರನ್ನು ಮಲ್ಪೆಯ ಜೀವರಕ್ಷಕ ತಂಡದ ಸದಸ್ಯರು ಸುರಕ್ಷಿತವಾಗಿ ಮೇಲಕ್ಕೆ ಕರೆತಂದು ರಕ್ಷಿಸಿದ ಘಟನೆ ವರದಿಯಾಗಿದೆ.

ಕೊಪ್ಪಳ ಜಿಲ್ಲೆ ಬನಕಟ್ಟಿ ಗ್ರಾಮದ ಮೂವರು ಪ್ರವಾಸಿಗರು ಉಡುಪಿಗೆ ಪ್ರವಾಸಕ್ಕೆಂದು ಬಂದಿದ್ದು, ಸಂಜೆ 5:20ರ ಸುಮಾರಿಗೆ ಮಲ್ಪೆಯ ಸಮುದ್ರದಲ್ಲಿ ನೀರಿನಲ್ಲಿ ಆಡುತಿದ್ದಾಗ ಕೊಚ್ಚಿಕೊಂಡು ಹೋಗಿದ್ದರು. ತಕ್ಷಣ ರಕ್ಷಣೆಗೆ ಧುಮುಕಿದ ಮಲ್ಪೆ ಲೈಫ್‌ಗಾರ್ಡ್ ಸದಸ್ಯರು ಪವನ್ ಮಡಿಲಾ (21), ಚೇತನ (19) ಹಾಗೂ ಪ್ರಿಯದರ್ಶಿನಿ (20) ಇವರನ್ನು ರಕ್ಷಿಸಿ ಸುರಕ್ಷಿತವಾಗಿ ಮೇಲಕ್ಕೆ ಕರೆ ತಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News