ಕೆರೆಗೆ ಬಿದ್ದು ಮಹಿಳೆ ಸಾವು

Update: 2021-10-14 15:26 GMT

ಕುಂದಾಪುರ, ಅ.14: ಮೇಯಲು ಬಿಟ್ಟ ದನವನ್ನು ಹೊಡೆದುಕೊಂಡು ಬರಲು ಮನೆಯಿಂದ ಹೋದ ಮಹಿಳೆಯೊಬ್ಬರು ಅಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕರ್ಕುಂಜೆ ಗ್ರಾಮದ ನೆರಳಕಟ್ಟೆಯಿಂದ ವರದಿಯಾಗಿದೆ. ಮೃತರನ್ನು ರತ್ನಾವತಿ (54) ಎಂದು ಗುರುತಿಸಲಾಗಿದೆ.

ರತ್ನಾವತಿ ಅವರು ಬುಧವಾರ 3 ಗಂಟೆ ಸುಮಾರಿಗೆ ದನವನ್ನು ಹೊಡೆದು ಕೊಂಡು ಬರಲು ಸಂಜೆಯಾದರೂ ಬಾರದಿದ್ದಾಗ ಮನೆಯವರು ಹುಡುಕಾಡಿದ್ದು ಆರು ಗಂಟೆಯ ಸುಮಾರಿಗೆ ಮೃತದೇಹವು ಮನೆಯ ಬಳಿಯ ನಾರಾಯಣ ಶೆಟ್ಟಿಯವರಿಗೆ ಸೇರಿದ ಜಾಗದಲ್ಲಿರುವ ಕೆರೆಯಲ್ಲಿ ಕಂಡುಬಂದಿತ್ತು. ಕೆರೆಯ ಮೇಲಿನ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತಿದ್ದಾಗ ಅಕಸ್ಮಿಕ ವಾಗಿ ಕಾಲುಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News