ಪುತ್ತೂರು; ಯುವಕನಿಗೆ ಲೈಂಗಿಕ ಕಿರುಕುಳ: ಪ್ರಕರಣ ದಾಖಲು

Update: 2021-10-16 17:43 GMT

ಪುತ್ತೂರು: ಸಂಜೆ ವೇಳೆಗೆ ವಾಕಿಂಗ್ ಹೋಗುತ್ತಿದ್ದ ಯುವಕನ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ಪ್ರಕರಣ ಪುತ್ತೂರು ತಾಲೂಕಿನ ಕಬಕದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಕಬಕ ಸಮೀಪದ ಮುರ ಎಂಬಲ್ಲಿನ ನಿವಾಸಿ ಗುರುಪ್ರಸಾದ್ (20) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಎಂಡೋ ಪೀಡಿತ ಯುವಕ. ಸ್ಥಳೀಯ ನಿವಾಸಿ ಮಹಮ್ಮದ್ ಹನೀಫ್ ದೌರ್ಜನ್ಯ ಎಸಗಿದ ಅರೋಪಿ ಎಂದು ದೂರಲಾಗಿದೆ.

ಗುರುಪ್ರಸಾದ್ ಪ್ರತಿನಿತ್ಯ ಸಂಜೆ ವೇಳೆ ವಾಕಿಂಗ್ ಹೋಗುತ್ತಿದ್ದ ಎನ್ನಲಾಗಿದ್ದು, ಎಂದಿನಂತೆ ಶುಕ್ರವಾರ ಸಂಜೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲಿ ಮುರ ರೈಲ್ವೇ ಜಂಕ್ಷನ್ ಬಳಿಯಲ್ಲಿ ಆರೋಪಿ ಕಬ್ಬು ನೀಡುವುದಾಗಿ ಹೇಳಿ ಪಕ್ಕದಲ್ಲಿರುವ ಪೊದೆಯೊಂದರ ಬಳಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಗುರುಪ್ರಸಾದ್ ಮನೆಗೆ ಬಂದಾಗ ಆತನ ಅಂಗಿಯಲ್ಲಿ ಮಣ್ಣು ಆಗಿರುವುದನ್ನು ಗಮನಿಸಿ ಮನೆಯವರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಆತನ ತಂದೆ ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಆರೊಪಿಯ ವಿರುದ್ದ ಐಪಿಸಿ ಕಲಂ 504,323,377 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News