ಉಳ್ಳಾಲ ನಗರ ಸಭೆಗೆ ಪ್ರಶಸ್ತಿ
Update: 2021-10-17 16:25 IST
ಉಳ್ಳಾಲ: ಘನ ತ್ಯಾಜ್ಯ ನಿರ್ವಹಣೆ ಯಲ್ಲಿ ಉಳ್ಳಾಲ ನಗರ ಸಭೆ ಪ್ರಶಸ್ತಿಗೆ ಭಾಜನವಾಗಿದೆ.
ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪೌರಾಡಳಿತ ಸಚಿವ ಟಿ.ಬಿ.ನಾಗರಾಜ್ ರವರು ಬೆಂಗಳೂರುನ ವಿಧಾನ ಸೌಧದಲ್ಲಿ ಸೀಮ್ಯಾಕ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದು, ಪೌರಾಯುಕ್ತ ರಾಯಪ್ಪ, ಅಧ್ಯಕ್ಷ ಚಿತ್ರ ಕಲಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಗಾಯತ್ರಿ ಎನ್ ನಾಯಕ್ ಫಲಕ ಹಾಗೂ 50 ಸಾವಿರ ರೂ. ನಗದು ಒಳಗೊಂಡ ಪ್ರಶಸ್ತಿ ಫಲಕ ಪಡೆದರು.