ಗ್ರಾಪಂ ನೌಕರರಿಂದ ಮಟ್ಟು ಕಡಲ ಕಿನಾರೆ ಸ್ವಚ್ಚತೆ

Update: 2021-10-17 16:05 GMT

ಕಾಪು, ಅ.17: ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋ ಭಿವೃಧ್ಧಿ ಸಂಘ(ಆರ್‌ಡಿಪಿಆರ್) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಡಳಿತ, ಜಿಪಂ, ಸ್ವಚ್ಚ ಭಾರತ್ ಮಿಷನ್ ಉಡುಪಿ, ಕೋಟೆ ಗ್ರಾಪಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪಂಚಾಯತ್ ನೌಕರ ರಿಂದ ಕೋಟೆ ಗ್ರಾಪಂ ವ್ಯಾಪ್ತಿಯ ಮಟ್ಟು ಕಡಲ ಕಿನಾರೆಯ ಸ್ವಚ್ಚತಾ ಕಾರ್ಯ ಕ್ರಮವನ್ನು ರವಿವಾರ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಕೋಟೆ ಗ್ರಾಪಂ ಅಧ್ಯಕ್ಷ ಕಿಶೋರ್ ಕುಮಾರ್, ಉದ್ಯಮಿ ಕೆ. ಸತ್ಯೆಂದ್ರ ಪೈ, ಎನ್‌ಆರ್‌ಎಲ್ಎಂನ ಜಿಲ್ಲಾ ಸಂಯೋಜಕ ಪಾಂಡುರಂಗ, ಸಂಘದ ರಾಜ್ಯ ಕಾರ್ಯದರ್ಶಿ ಪದ್ಮನಾಭ ಕುಲಾಲ್, ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಶೃತಿ ಕಾಂಚನ್, ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಕೆ.ತೆಂಕನಿಡಿಯೂರು, ಉಪಾಧ್ಯಕ್ಷ ಹೇಮಚಂದ್ರ ನಂದಳಿಕೆ, ಉಡುಪಿ ತಾಲೂಕು ಸಮಿತಿ ಅಧ್ಯಕ್ಷ ಅರವಿಂದ ರಾವ್ ಕುಕ್ಕೆಹಳ್ಳಿ, ಕಾರ್ಕಳ ಅಧ್ಯಕ್ಷ ಸೈಫ್ಫುಲ್‌ ನಲ್ಲೂರು, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಅಲೆವೂರು, ಖಚಾಂಚಿ ಸಚಿನ್ ಮಣಿಪುರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News