ನವೋದಯ ಗೆಳೆಯರ ಬಳಗ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ
Update: 2021-10-19 13:43 GMT
ಕಾಪು, ಅ.19: ನವೋದಯ ಗೆಳೆಯರ ಬಳಗ ದೇವಳಗುಜ್ಜಿ ಇದರ 2021-22ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಆಯ್ಕೆ ಯಾಗಿದ್ದಾರೆ.
ರವಿವಾರ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ದೇವೇಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಜೀವನ್ ಭಂಡಾರಿ, ಕಾರ್ಯದರ್ಶಿಯಾಗಿ ಪೂರ್ಣೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಲತಾ, ಕೋಶಾಧಿಕಾರಿಯಾಗಿ ರಮಣಿ, ಲೆಕ್ಕಾ ಪರಿಶೋಧಕರಾಗಿ ಅಶೋಕ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ಸದಾಶಿವ ಪೂಜಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಕ್ಷಿತ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ ಯಾಗಿ ಸಂತೋಷ್ ಆಚಾರ್, ಗೌರವ ಸಲಹೆಗಾರರಾಗಿ ವಿಲ್ಫ್ರೇಡ್ ಮೆಂಡೋನ್ಸಾ ಮತ್ತು ಪ್ರವೀಣ್, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಜಯ ಪೂಜಾರಿ, ಅಸ್ಲಾಮ್, ಪ್ರಕಾಶ್ ಕುಮಾರ್, ಹರೀಶ್ ಆಯ್ಕೆಯಾಗಿದ್ದಾರೆ