ಪಡುಬಿದ್ರೆ : ಕಸ ಎಸೆದ ವ್ಯಕ್ತಿಗೆ 5000 ರೂ. ದಂಡ

Update: 2021-10-19 14:42 GMT

ಪಡುಬಿದ್ರೆ : ಕಂಪೆನಿಯೊಂದರ ಕಸವನ್ನು ಖಾಸಗಿ ಜಾಗದಲ್ಲಿ ಸುರಿದಿದ್ದು, ಈ ಬಗ್ಗೆ ಎಲ್ಲೂರು ಗ್ರಾಮ ಪಂಚಾಯತ್ ಕಸ ಸುರಿದ ವ್ಯಕ್ತಿಗೆ ಎರಡು ದಿನದೊಳಗೆ ಸ್ವಚ್ಛಗೊಳಿಸಲು ಮತ್ತು 5000 ರೂ. ದಂಡ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.

ಎಲ್ಲೂರು ಪಂಚಾಯತ್ ಸದಸ್ಯರಾದ ರವಿರಾಜ್‍ ಅವರ ಪಟ್ಟಾ ಜಾಗಕ್ಕೆ 2 ಲೋಡ್ ಕಸವನ್ನು ಸುರಿಯಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಇದನ್ನು ಬೆಳಪುವಿನ ರಝಾಕ್ ಸುರಿದಿರುವುದು ಬೆಳಕಿಗೆ ಬಂತು.

ಇನ್ನಾ ಗ್ರಾಮ ಪಂ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಯ ಘನ ತ್ಯಾಜ್ಯವನ್ನು ತೆರವುಗೊಳಿಸಲು ಬೆಳಪುವಿನ ರಝಾಕ್ ಅವರಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ರಝಾಕ್ ಆ ಕಸವನ್ನು ಖಾಲಿ ಜಾಗದಲ್ಲಿ ಸುರಿದು ಹೋಗಿದ್ದರು. ಎಲ್ಲೂರು ಪಂಚಾಯತ್ ಅಧ್ಯಕ್ಷ ಜಯಂತ್ ಕುಮಾರ್ ಕಸವನ್ನು ನೀಡಿದ ಕಂಪನಿಯ ಅಧಿಕಾರಿಗಳನ್ನು ಮತ್ತು ಕಸ ಸುರಿದ ರಝಾಕ್‍ ಅವರನ್ನು ಸ್ಥಳಕ್ಕೆ ಕರೆಸಿ 5000 ರೂ. ದಂಡ ವಿಧಿಸಿದರು. ಅಲ್ಲದೆ ಈ ಕಸವನ್ನು ಗುರುವಾರದೊಳಗೆ ತೆರವುಗೊಳಿಸದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News