ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡುವಂತೆ ಮನವಿ

Update: 2021-10-19 15:57 GMT

ಉಡುಪಿ, ಅ.19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸು ನಿಲ್ದಾಣಕ್ಕೆ ಶ್ರೀ ಬ್ರಹ್ಮ ನಾರಾಯಣ ಗುರುಗಳ ಹೆಸರು ಇಡು ವಂತೆ ಆಗ್ರಹಿಸಿ ಬನ್ನಂಜೆ ಬಿಲ್ಲವ ಸೇವಾ ಸಂಘದ ವತಿಯಿಂದ ಶಾಸಕ ಕೆ.ರಘುಪತಿ ಭಟ್ ಇವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲೆ ಅತೀ ದೊಡ್ಡ ಸಂಖ್ಯೆಯಲ್ಲಿ ಬಿಲ್ಲವರು ಇರುವುದರಿಂದ ಸಮಾಜದ ಗುರು ಶ್ರೀಬ್ರಹ್ಮ ನಾರಾಯಣ ಗುರುಗಳು ದೇಶದಾದ್ಯಂತ ಪ್ರಖ್ಯಾತಿ ಹೊಂದಿ ದವರು. ಇವರೇ ಹೆಸರೆ ಇದಕ್ಕೆ ಸೂಕ್ತ ಎಂಬುವುದು ಮನವಿಯಲ್ಲಿ ತಿಳಿಸಲಾಗಿದೆ. ಆದರೆ ಈಗಾಗಲೇ ಡಾ.ವಿ.ಎಸ್.ಆಚಾರ್ಯ ಹೆಸರು ಇಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಆನಂದ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಮಾಧವ ಪೂಜಾರಿ, ಕೋಶಾಧಿಕಾರಿ ಪಿ.ಕೆ.ಶಂಕರ್, ಸದಸ್ಯರಾದ ಶೇಖರ ಪೂಜಾರಿ, ನಾರಾಯಣ ಜತ್ತನ್, ಉದಯ ಪೂಜಾರಿ, ಸದಾನಂದ ಅಮೀನ್, ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News