ಸ್ಕೂಟರ್‌ ನಿಂದ ಬಿದ್ದು ಮಹಿಳೆ ಮೃತ್ಯು

Update: 2021-10-19 16:00 GMT

ಕುಂದಾಪುರ, ಅ.19: ರಸ್ತೆ ಹೊಂಡ ತಪ್ಪಿಸಲು ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಸಹಸವಾರಿಣಿ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಅ.18ರಂದು ಮಧ್ಯಾಹ್ನ ಕುಂದಾಪುರ ಶಾಸ್ತ್ರೀ ಪಾರ್ಕ್ ಸಂಗಂ ರಾ.ಹೆ. 66ರ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಬಿ.ಕಾವೇರಿ ಎಂದು ಗುರುತಿಸಲಾಗಿದೆ. ಇವರು ಸುನೀಲ್ ಎಂಬವರ ಸ್ಕೂಟರ್‌ನಲ್ಲಿ ಶಾಸ್ತ್ರೀ ಪಾರ್ಕ್ ಕಡೆಯಿಂದ ಸಂಗಂ ಕಡೆಗೆ ಹೋಗು ತ್ತಿದ್ದು, ಈ ವೇಳೆ ಸುನೀಲ್ ರಸ್ತೆಯಲ್ಲಿನ ಹೊಂಡ ತಪ್ಪಿಸಲು ಒಮ್ಮೇಲೆ ಬ್ರೇಕ್ ಹಾಕಿದರು. ಆಗ ಹಿಂಬದಿ ಸವಾರರಾದ ಕಾವೇರಿ ಸ್ಕೂಟರ್‌ನಿಂದ ರಸ್ತೆಗೆ ಜಾರಿ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿ ಯಾಗದೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು.

ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News