ಬಜಾಲ್ ನಂತೂರಿನಲ್ಲಿ ಮೀಲಾದುನ್ನಬಿ
ಮಂಗಳೂರು, ಅ.19: ಮೀಲಾದುನ್ನಬಿ ಪ್ರಯುಕ್ತ ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಮಂಗಳವಾರ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ, ಮನಪಾ ಸದಸ್ಯ ಅಬ್ದುಲ್ ರವೂಫ್ ಧ್ವಜಾರೋಹಣ ನೆರವೇರಿಸಿ ದರು. ಮಸೀದಿಯ ಖತೀಬ್ ಪಿ.ಎಸ್.ಮುಹಮ್ಮದ್ ಸಖಾಫಿ ದುವಾಗೈದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಕೆ.ಇ. ಅಶ್ರಫ್, ಬಜಾಲ್ ನಂತೂರು ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾದ ಡಿ.ಕೆ.ಅಬ್ದುಲ್ ಹಮೀದ್, ಬಿ.ಎನ್.ಅಬ್ಬಾಸ್ ಹಾಜಿ, ಮಾಜಿ ತಾಪಂ ಸದಸ್ಯ ಅಹ್ಮದ್ ಬಾವ, ಸಂಚಾಲಕ ಬಿ.ಫಕ್ರುದ್ದೀನ್, ಮಸೀದಿಯ ಮಾಜಿ ಕಾರ್ಯದರ್ಶಿ ಮೊಹಿಯುದ್ದೀನ್ ಕುಂಞಿ, ಉಪಾಧ್ಯಕ್ಷರಾದ ಎಸ್.ಎಚ್ ಹನೀಫ್ ಹಾಜಿ, ಅಶ್ರಫ್ ತೋಟ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಅಬ್ದುಲ್ ಸಲಾಂ, ಕಾರ್ಯದರ್ಶಿ ಶಾಫಿ ಮಿಸ್ಬಾಹಿ ಉಸ್ತುವಾರಿ ಗಳಾದ ನಝೀರ್ ಬಜಾಲ್, ಹಸನಬ್ಬ, ಫೈಸಲ್ ನಗರ ಗೌಸಿಯಾ ಜುಮಾ ಮಸೀದಿ ಅಧ್ಯಕ್ಷ ಎಂ.ಆರ್. ರಫೀಕ್, ಸದಸ್ಯರಾದ ಹನೀಫ್ ಬೈಕಂಪಾಡಿ, ಹನೀಫ್ ಕೆಳಗಿನ ಮನೆ ಮತ್ತಿತರರು ಉಪಸ್ಥಿತರಿದ್ದರು.
ಬಜಾಲ್ ನಂತೂರು ಹಯಾತುಲ್ ಇಸ್ಲಾಂ ಮದ್ರಸದ ಸದರ್ ಮುಅಲ್ಲಿಂ ಅಬೂಬಕರ್ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು