ಸಾಂಬಾರತೋಟ: ಮೀಲಾದುನ್ನಬಿ ಆಚರಣೆ
Update: 2021-10-19 17:24 GMT
ಮಂಗಳೂರು: ಸಾಂಬಾರತೋಟ ನೂರಾನಿ ಜುಮಾ ಮಸೀದಿ ಇದರ ಆಶ್ರಯದಲ್ಲಿ ಮೀಲಾದುನ್ನಬಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ಧ್ವಜಾರೋಹಣವನ್ನು ನೂರಾನಿ ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಇಬ್ರಾಹಿಂ ಅವರು ನೆರವೇಸಿದರು. ರಝಾಕ್ ಅಹ್ಸನಿ ದುಆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಸನ್ ಹಾಜಿ, ಎಸ್ ಕೆ ಖಾದರ್ ಹಾಜಿ, ಎ ಎಸ್ ಅಬ್ದುರ್ರಹ್ಮಾನ್ ಹಾಜಿ, ಮೂಸ ಕುಂಞಿ, ಎಸ್ ಎಸ್ ಮೂಸ ಹಾಜಿ, ಮಸೀದಿ ಕಾರ್ಯದರ್ಶಿ ಮುಹಮ್ಮದ್, ಖಿದ್ಮಾತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಶಾಹುಲ್ ಹಮೀದ್ ಎಸ್ ವೈ ಎಸ್ ಅಧ್ಯಕ್ಷ ಅಬ್ದುಲ್ಲಾ, ಎಸ್ ಎಸ್ ಎಫ್ ಅಧ್ಯಕ್ಷ ತಬ್ಸಿರ್, ನಾಸಿರ್ ಮತ್ತಿತರರು ಉಪಸ್ಥಿತರಿದ್ದರು.