ಅಲ್‌ ಇಹ್ಸಾನ್ ದಅ್ವಾ ಕಾಲೇಜಿನಲ್ಲಿ ನೆಬಿ ದಿನಾಚರಣೆ

Update: 2021-10-20 14:18 GMT

ಕಾಪು, ಅ. 20: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನದ ಅಲ್ ಇಹ್ಸಾನ್ ದಅ್ವಾ ಕಾಲೇಜ್‌ನಲ್ಲಿ ನೆಬಿ ದಿನಾಚರಣೆಯ ಪ್ರಯುಕ್ತ ಮೌಲೀದ್ ಪಾರಾಯಣ ಹಾಗೂ ಬೃಹತ್ ಬುರ್ದಾ ಮಜ್ಲೀಸ್ ಅ.18ರಂದು ನಡೆಯಿತು.

ಅ.19ರಂದು ಮೌಲಿದ್ ಹಾಗೂ ಪ್ರವಾದಿ ಪ್ರಕೀರ್ತನೆ ನಡೆಸಲಾಯಿತು. ಬಳಿಕ ಮೂಳೂರಿನ ದರ್ಗಾ ಶರೀಫ್ ಝಿಯಾರತ್ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಧಾನ ವ್ಯವಸ್ಥಾಕ ಮುಸ್ತಫಾ ಸಅದಿ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಅಲ್ ಇಹ್ಸಾನ್ ದಅ್ವಾ ಕಾಲೇಜ್ ಪ್ರಾಂಶುಪಾಲ ಸ್ವಾಬಿರ್ ಸಅದಿ ವಹಿಸಿದ್ದರು. ಶಫೀಕ್ ಅಹ್ಸನಿ ಹಾಗೂ ಹನೀಫ್ ಸಅದಿ ಆಸಂಶೆ ಭಾಷಣವನ್ನು ಮಾಡಿದರು. ಅದ್‌ನಾನ್ ಸ್ವಾಗತಿಸಿದರು. ಅಜ್ಮಲ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News