ಗಂಗೊಳ್ಳಿ: ಕೆಲಸ ಇಲ್ಲದೆ ಮೀನುಗಾರ ಆತ್ಮಹತ್ಯೆ

Update: 2021-10-20 16:20 GMT

ಗಂಗೊಳ್ಳಿ, ಅ.20: ಮೀನುಗಾರಿಕೆ ಇಲ್ಲದೆ ಹಣಕಾಸಿನ ಅಡಚಣೆಯಿಂದ ಮೀನುಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಅ.19ರಂದು ಮಧ್ಯಾಹ್ನ ವೇಳೆ ತ್ರಾಸಿ ಎಂಬಲ್ಲಿ ನಡೆದಿದೆ.

ಮೃತರನ್ನು ತ್ರಾಸಿ ಹೊಸಪೇಟೆ ನಿವಾಸಿ ಕರಿಯ ಮೊಗವೀರ (62) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಇತ್ತೀಚಿಗೆ ಸರಿಯಾಗಿ ಮೀನುಗಾರಿಕೆ ಇಲ್ಲದೆ ಹಣಕಾಸಿನ ಅಡಚಣೆಯಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News