ಉಡುಪಿ: ದಂತ ವೈದ್ಯರ ಖಾತೆಯಿಂದ ಹಣ ವರ್ಗಾಯಿಸಿ ವಂಚನೆ

Update: 2021-10-20 16:33 GMT

ಉಡುಪಿ, ಅ.20: ಗೂಗಲ್ ಪೇ ಮೂಲಕ ದಂತ ವೈದ್ಯರೊಬ್ಬರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ಡ್ರಾ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರವೀಣ್ ಕುಮಾರ್ ಎಂಬಾತ ಅ.19ರಂದು ಉಡುಪಿಯ ದಂತ ವೈದ್ಯ ಡಾ. ಗಿರೀಶ್ ಶೆಟ್ಟಿ ಅವರಿಗೆ ಕರೆ ಮಾಡಿ, ಅವರ ತಂದೆಯ ದಂತ ಚಿಕಿತ್ಸೆಯ ಬಗ್ಗೆ ಅಂದಾಜು ದರಪಟ್ಟಿ ನೀಡುವಂತೆ ಕೇಳಿದ್ದರು. ಈ ಬಗ್ಗೆ ಡಾ. ಗಿರೀಶ್ ಶೆಟ್ಟಿ ದರಪಟ್ಟಿ ನೀಡಿದ್ದರು.

ನಂತರ ಆರೋಪಿಯು ಹಣವನ್ನು ಗೂಗಲ್ ಪೇ ಮಾಡುವುದಾಗಿ ತಿಳಿಸಿ, ಮೊದಲು ನೀವು ನನಗೆ 1ರೂ. ಗೂಗಲ್ ಪೇ ಮಾಡುವಂತೆ ಹೇಳಿದ್ದನು. ಕೆಲಸದ ಒತ್ತಡದಲ್ಲಿ ಡಾ.ಗಿರೀಶ್ ಶೆಟ್ಟಿಯ ಅರಿವಿಗೆ ಬಾರದೆ ಪ್ರವೀಣ್ ಕುಮಾರ್, ಕೇಳಿದ ಎಲ್ಲಾ ಮಾಹಿತಿಯನ್ನು ನೀಡಿದರು. ನಂತರ ಇವರ ಖಾತೆ ಯಿಂದ ಆರೋಪಿಯು ಒಟ್ಟು 79,000 ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದನು ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News