ಮೀನುಗಾರಿಕೆ ವೇಳೆ ಬೋಟಿನಲ್ಲಿ ಕುಸಿದು ಮೃತ್ಯು

Update: 2021-10-20 16:48 GMT

ಮಲ್ಪೆ, ಅ. 20: ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ತಮಿಳುನಾಡಿನ ಬೋಟ್ ಮಾಲಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ತಮಿಳುನಾಡು ರಾಜ್ಯದ ನಾರಾಪಟ್ಟಣಂ ನಿವಾಸಿ ರಾಮಕೃಷ್ಣನ್ ಸಲ್ವಾರಾಜ್ (46) ಎಂದು ಗುರುತಿಸಲಾಗಿದೆ. ಇವರು ಇತರ ಮೀನುಗಾರ ರೊಂದಿಗೆ ಅ.16ರಂದು ಗೋವಾದ ಮಾಸ್ಕೋದಿಂದ ಮೀನುಗಾರಿಕೆಗೆ ಆಳ ಸಮುದ್ರಕ್ಕೆ ಹೊರಟಿದ್ದು, ಅ.19ರಂದು ಬೆಳಗ್ಗೆ 5ಗಂಟೆ ಸುಮಾರಿಗೆ ಮಲ್ಪೆ ಯಿಂದ ಅರಬ್ಬಿಸಮುದ್ರದಲ್ಲಿ ಸುಮಾರು 155 ನಾಟಿಕಲ್ ದೂರ ಆಳ ಸಮುದ್ರ ದಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ರಾಮಕೃಷ್ಣನ್ ಸೆಲ್ವಾ ರಾಜ್ ಕುಸಿದು ಬಿದ್ದರೆನ್ನಲಾಗಿದೆ. ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಮಲ್ಪೆಗೆ ಕರೆ ತಂದು ಅಜ್ಜರಕಾಡು ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News