ಅಲ್ ಇಹ್ಸಾನ್ ದಅ್ ವಾ ಕಾಲೇಜ್‍ನಲ್ಲಿ ಮೀಲಾದುನ್ನಬಿ ಆಚರಣೆ

Update: 2021-10-20 17:00 GMT

ಮಂಗಳೂರು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಅಧೀನದ ಅಲ್ ಇಹ್ಸಾನ್ ದಅ್ ವಾ ಕಾಲೇಜ್‍ನಲ್ಲಿ ನೆಬಿ ದಿನಾಚರಣೆಯ ಪ್ರಯುಕ್ತ ಮೌಲೀದ್ ಪಾರಾಯಣ ಹಾಗೂ ಬೃಹತ್ ಬುರ್ದಾ ಮಜ್ಲೀಸ್ ಸೋಮವಾರ ನಡೆಯಿತು.

ಮಂಗಳವಾರ ಬೆಳಗ್ಗೆ 4 ಗಂಟೆಗೆ ಸರಿಯಾಗಿ ಮೌಲಿದ್ ಹಾಗೂ ಪ್ರವಾದಿ ಪ್ರಕೀರ್ತನೆ ನಡೆಸಲಾಯಿತು. ಬಳಿಕ ಮೂಳೂರಿನ ದರ್ಗಾ ಶರೀಫ್ ಝಿಯಾರತ್ ಹಾಗೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಇಹ್ಸಾನ್ ದಅ್ ವಾ ಕಾಲೇಜ್ ಪ್ರಿನ್ಸಿಪಾಲರಾದ ಸ್ವಾಬಿರ್ ಸಅದಿ ವಹಿಸಿದ್ದರು. ಜನರಲ್ ಮ್ಯಾನೇಜರ್ ಮುಸ್ತಫಾಸಅದಿ ಕಾರ್ಯಕ್ರಮ ಉದ್ಘಾಟಿಸಿದರು. ಶಫೀಕ್ ಅಹ್ಸನಿ ಹಾಗೂ ಹನೀಫ್ ಸಅದಿ ಆಸಂಶೆ ಬಾಷಣವನ್ನು ಮಾಡಿದರು.  ಅದ್‍ನಾನ್ ಸ್ವಾಗತಿಸಿ, ಅಜ್ಮಲ್ ವಂದಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News