ಕೂಲಿ ಕಾರ್ಮಿಕ ನಾಪತ್ತೆ: ದೂರು

Update: 2021-10-20 17:02 GMT

ಪುತ್ತೂರು: ಗಾರೆ ಕೆಲಸ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. 

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಲಾಲ್‍ಗೋಳ ಎಂಬಲ್ಲಿನ ನಿವಾಸಿ ಪ್ರಸ್ತುತ ಪುತ್ತೂರು ತಾಲೂಕಿನ ಪುರುಷರಕಟ್ಟೆ ಕೈಪಂಗಳ ಎಂಬಲ್ಲಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅಬೂತ್ವಾಹಿರ್(21) ನಾಪತ್ತೆಯಾದ ಕಾರ್ಮಿಕ. 

ಈತ ಕೈಪಂಗಳದಲ್ಲಿ ಕಳೆದ 20 ದಿನಗಳಿಂದ ಹೊಸ ಮನೆ ನಿರ್ಮಾಣದ ಗಾರೆ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಶನಿವಾರ ಪುರುಷರಕಟ್ಟೆಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಹೋಗಿದ್ದು ಬಳಿಕ ಹಿಂದಿರುಗದೆ ನಾಪತ್ತೆಯಾಗಿರುವುದಾಗಿ ಆತನ ಸಂಬಂಧಿಕ ಸುಚಂದ್ ಎಸ್.ಕೆ ಎಂಬವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News