ನೇರಳಕಟ್ಟೆ: ಅ. 24ರಂದು ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಪ್ರತಿಭೋತ್ಸವ

Update: 2021-10-21 09:19 GMT

ವಿಟ್ಲ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ " ನಿರೀಕ್ಷೆಗಳ ನೀಲ ನಕ್ಷೆ " ಸ್ಲೋಗನ್ ನೊಂದಿಗೆ ನಡೆಯುವ ಪ್ರತಿಭೋತ್ಸವ ಕಾರ್ಯಕ್ರಮವು ಅ. 24ರಂದು  ನೇರಳಕಟ್ಟೆ ತಾಜುಲ್ ಫುಖಹಾ‌ಅ್ ಬೇಕಲ್ ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.

ಸಯ್ಯಿದ್ ಸಾಬಿತ್ ಮುಈನೀ ಸಖಾಫಿ ಪಾಟ್ರಕೋಡಿ ಅಧ್ಯಕ್ಷತೆಯಲ್ಲಿ ಹುಸೈನ್ ಮದನಿ ನೇರಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸುವರು. ಸಯ್ಯಿದ್ ಹಂಝ ಅಲ್ ಹಾದಿ ತಂಙಳ್  ಪಾಟ್ರಕೋಡಿ ದುಅ ನಡೆಸಿಕೊಡುವರು, ಸಮಾರೋಪ ಸಮಾರಂಭ ದಲ್ಲಿ ಜಿಎಂ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸುವರು, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನೇತೃತ್ವ ನೀಡುವರು, ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಉದ್ಘಾಟನಾ ಭಾಷಣ ಮಾಡುವರು. ಕಾರ್ಯಕ್ರಮದಲ್ಲಿ ಹಲವಾರು ಉಲಮಾ ಉಮರಾ ನಾಯಕರುಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News