ಅ. 26ರಂದು ಮಂಗಳೂರಿನಲ್ಲಿ ಕಾರುಣ್ಯ ಸಮಾವೇಶ

Update: 2021-10-22 17:36 GMT

ಮಂಗಳೂರು, ಅ.22: ಸುನ್ನೀ ಯುವಜನ ಸಂಘ ಮಂಗಳೂರು ಸೆಂಟರ್ ಸಮಿತಿ ಸಹಭಾಗಿತ್ವದಲ್ಲಿ ಅ.26ರಂದು ಸಂಜೆ 5 ಗಂಟೆಗೆ ನಗರದ ಬಂದರು ಝೀನತ್ ಭಕ್ಷ್ ಯತೀಂ ಖಾನಾ ಹಾಲ್‌ನಲ್ಲಿ ನಡೆಯಲಿದೆ ಎಂದು ಮುಈನುಸ್ಸುನ್ನ ಅಕಾಡೆಮಿ ಹಾವೇರಿ ಇದರ ಅಧ್ಯಕ್ಷ ಕೆ.ಎಂ. ಮುಸ್ತಾ ನಈಮಿ ಹಾವೇರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಉತ್ತರ ಕರ್ನಾಯಕದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ, ಸಮಾಜ ಸೇವಾ ಚಟುವಟಿಕೆಗಳಲ್ಲಿ ನಿರತವಾಗಿರುವ ‘ಮುಈನುಸ್ಸುನ್ನ ಅಕಾಡೆಮಿ ಕರ್ನಾಟಕ’ ಸಂಸ್ಥೆಯು ಹಾವೇರಿ ಜಿಲ್ಲೆಯನ್ನು ಕೇಂದ್ರೀಕರಿಸಿ ಕಳೆದ ಏಳು ವರ್ಷಗಳಿಂದ ಕಾರ್ಯಾಚರಿಸುತ್ತಿದೆ.

ಪ್ರವಾದಿ ಜನ್ಮ ಮಾಸಾಚರಣೆಯ ಭಾಗವಾಗಿ ಆರ್ಥಿಕವಾಗಿ ಬಹಳ ಸಂಕಷ್ಟದಲ್ಲಿರುವ ಈ ಭಾಗದ ಆಯ್ದ ಸಾವಿರ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ಒದಗಿಸುವ ಸಲುವಾಗಿ ಸಂಸ್ಥೆಯು ‘ಕರುಣೆಯ ಕೈ’ ಎಂಬ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಇದರ ಪ್ರಚಾರಾರ್ಥ ಅ. 26ರಂದು ಮಂಗಳೂರಿನಲ್ಲಿ ಕಾರುಣ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಕೋಶಾಕಾರಿ ಡಾ.ಶೇಖ್ ಬಾವ, ಮಂಗಳೂರು ಸೆಂಟರ್ ಎಸ್‌ವೈಎಸ್‌ನ ಅಧ್ಯಕ್ಷ ಕೆ.ಸಿ. ಸುಲೈಮಾನ್ ಮುಸ್ಲಿಯಾರ್, ನಗರ ಅಧ್ಯಕ್ಷ ಅಬ್ದುಲ್ ರಶೀದ್ ಪಾಂಡೇಶ್ವರ, ಪ್ರಧಾನ ಕಾರ್ಯದರ್ಶಿ ಹಸನ್ ಪಾಂಡೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News